ಅಫಜಲಪುರ: ಭಾರತೀಯ ಸಮ್ಮಾನ್ ಪ್ರಶಸ್ತಿ ಪಡೆದ ಡಾ. ಖುರ್ಷೀದ್ಗೆ ಸನ್ಮಾನ
Update: 2026-01-19 14:23 IST
ಕಲಬುರಗಿ: 2025ರ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಭಾಜನರಾದ ಡಾ. ಸೈಯದ್ ಅನ್ವರ್ ಖುರ್ಷೀದ್ ಅವರನ್ನು ಅಂಜುಮನ್ ಇಸ್ಲಾಂ ಕಮಿಟಿ ಮತ್ತು ಬೈತುಲ್ ಮಾಲ್ ಕಮಿಟಿ ವತಿಯಿಂದ ಸನ್ಮಾನಿ ಸಲಾಯಿತು.
ಪಟ್ಟಣದ ಜಾಮಿಯಾ ಮಸೀದಿಯ ಆವರಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮುಸ್ಲಿಂ ಸಮಾಜದ ಹಿರಿಯ ಮುಖಂಡರಾದ ಮಕ್ಬೂಲ್ ಪಟೇಲ್, ಮುನೀರ್ ಪಟೇಲ್, ಜಾಫರ್ ಪಟೇಲ್, ಖಾಲೀದ್ ಜಾಗಿರದಾರ, ಮುಫ್ತಿಕ್ ಖಮರೂಜಾ, ಮೌಲಾನಾ ಅಮೀನಸಾಬ್, ಹಾಜಿಸಾಬ ಮುಜಾವರ, ರಹೀಮ್ ಖೇಡಗಿ, ಬಿಲಾಲ್ ಪೀರಾವಲೇ, ರಫೀಕ್ ತೋಟೆಗಾರ, ಸೋಂದುಸಾಬ ನಗಾರ್ಚಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.