ಕಲಬುರಗಿ ಜಿಲ್ಲಾ ಯೂತ್ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ
Update: 2025-05-15 21:42 IST
ಕಲಬುರಗಿ : ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಹಲ್ಗಾಮ್ ಘಟನೆಯಲ್ಲಿ ಮೃತಪಟ್ಟಿರುವ ನಾಗರಿಕರು ಮತ್ತು ಪಾಕಿಸ್ತಾನ ವಿರುದ್ಧ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕರ ಸ್ಮರಣಾರ್ಥ ಹಿನ್ನೆಲೆಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷದ ಯುವ ಘಟಕದ ಜಿಲ್ಲಾ ಅಧ್ಯಕ್ಷ ಶಕೀಲ್ ಅಹಮದ್ ಸರಡಗಿ ಅವರ ನೇತೃತ್ವದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶಿವಾನಂದ ಹೊನಗುಂಟಿ, ಈರಣ್ಣ ಪಾಟೀಲ್ ಝಳಕಿ, ಕಾರ್ತಿಕ್ ನಾಟಿಕಾರ್, ರಾಜು ಮಳಗಿ, ಮೊಹಮ್ಮದ್ ಅಸ್ವಾನ್, ಅಜರ್ ಬಾದಲ್, ರಾಮಪ್ರಸಾದ್ ಕಾಂಬಳೆ, ಶರಣು ವಾರದ್, ಏಜಾಜ್ ನಿಂಬಾಳ್ಕರ್, ಟೈಗರ್ ವಿಘ್ನೇಶ್ವರ್, ಮಿಸ್ತ್ರಿ ಶರ್ಫುದ್ದೀನ್, ಕಾರ್ತಿಕ್ ಹೊಸಮನಿ, ಅಸ್ಲಂ ಸಿಂದಗಿ, ಪರಶುರಾಮ ನಾಟಿಕಾರ, ನಿಕಿಲ್ ನಾಗತಿಲಕ್, ಮಹಿಬೂಬ್, ಶೇಖ ಸಮರಿನ್ ಸೇರಿದಂತೆ ಇತರರು ಇದ್ದರು.