ಕಮಲಾಪುರ ತಾಲೂಕು ಭಾರತೀಯ ದಲಿತ ಪ್ಯಾಂಥರ್ ಸಮಿತಿ ರಚನೆ

Update: 2026-08-11 20:02 IST

ಕಮಲಾಪುರ: ಪಟ್ಟಣದ ವಸತಿ ಗೃಹದಲ್ಲಿ ಭಾರತೀಯ ದಲಿತ ಪ್ಯಾಂಥರ್ ತಾಲೂಕು ಸಮಿತಿ ರಚನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನಡೆಯಿತು.

ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಅಧ್ಯಕ್ಷ ರಮೇಶ ಚಿನ್ಮಾಯಿದಲಾಯ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು. ಈ ಸಂದರ್ಭದಲ್ಲಿ ಸತೀಶ್ ಹಿಪ್ಪರಗಿ ಅವರನ್ನು ತಾಲೂಕು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ತಾಲೂಕು ಸಮಿತಿಯ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಕಾಂಬ್ಳೆ ಹಾಗೂ ಅಶೋಕ ಸುತ್ತಾರ, ಪ್ರಧಾನ ಕಾರ್ಯದರ್ಶಿಯಾಗಿ ಮೋಹನ್ ಪ್ರಸನ್ನ, ಸಹ ಕಾರ್ಯದರ್ಶಿಗಳಾಗಿ ಬಲಜೀತ ಓಕುಳಿ ಹಾಗೂ ಬಂಡೆಪ್ಪ ಓಕುಳಿ, ಖಜಾಂಚಿಯಾಗಿ ಸಂಜುಕುಮಾರ ವರನಾಳ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾ ಉಪಾಧ್ಯಕ್ಷ ಭೀಮಾಶಂಕರ ದಂಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಿರೇಮಣಿ, ಕಲಬುರಗಿ ನಗರ ಅಧ್ಯಕ್ಷ ದಿಲೀಪಕುಮಾರ ಕಿರಿಸಾವಳಗಿ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕಕುಮಾರ ಗೌರೆ, ದಿಲೀಪ್ ಚಕ್ರವರ್ತಿ, ಪರಮೇಶ್ವರ, ಜೈ ಭೀಮ ಕಾಂಬ್ಳೆ, ದೇವರಾಜ ಡಿಗ್ಗಿ, ಮಲ್ಲಿಕಾರ್ಜುನ ಓಕಳಿ, ಚಿತಂಬರಾಯ ಕರಗಾರ, ಅಮರ ಪಟ್ನಾಯಕ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News