Kalaburagi | ಜೇವರ್ಗಿಯಲ್ಲಿ ಮನುಸ್ಮೃತಿ ದಹಿಸಿ ಪ್ರತಿಭಟನೆ
Update: 2025-12-26 16:35 IST
ಕಲಬುರಗಿ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮನುಸ್ಮೃತಿ ದಹನ ಮಾಡಿದ ದಿನದ ನಿಮಿತ್ತ ಜೇವರ್ಗಿ ತಾಲೂಕು ದಲಿತ ಸಂಘಟನೆಗಳ ಸಮನ್ವ ಸಮಿತಿ ವತಿಯಿಂದ ಜೇವರ್ಗಿ ಪಟ್ಟಣದ ಡಾ.ಅಂಬೇಡ್ಕರ್ ಮೂರ್ತಿ ಸಮೀಪ ಗುರುವಾರ ರಾತ್ರಿ ಮನುಸ್ಮೃತಿ ಪ್ರತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಮುಖಂಡರಾದ ಭೀಮರಾಯ ನಗನೂರ್, ಮಲ್ಲಣ್ಣ ಕೊಡಚಿ, ಸಿದ್ದರಾಮ ಕಟ್ಟಿ, ಶ್ರೀಹರಿ ಕರ್ಕಳ್ಳಿ, ರವಿ ಕುಳಗೇರಿ, ಮಲ್ಲು ಹೊಸ್ಮನಿ, ಸುರೇಶ್ ಡುಗನ್ಕರ್, ದೇವೇಂದ್ರ ಮುದವಾಳ, ಯಶವಂತ್ ಮಂದೇವಾಲ, ದೇವು ಬಡಿಗೇರ್, ಶರಣಬಸಪ್ಪ ಲಕನಪುರ್, ಮಿಲಿಂದ ಸಾಗರ್, ಸೇರಿದಂತೆ ಅನೇಕರಿದ್ದರು.