ಕಾಸರಗೋಡು: ವಿದ್ಯುತ್ ಶಾಕ್ ನಿಂದ ಯುವಕ ಮೃತ್ಯು

Update: 2024-03-22 12:05 GMT

ಪ್ರಜ್ವಲ್

ಕಾಸರಗೋಡು : ವಿದ್ಯುತ್ ಶಾಕ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿಪದವು ಎಂಬಲ್ಲಿ ಶುಕ್ರವಾರ ನಡೆದಿದೆ.

ಅಂಗಡಿಪದವಿನ ಪ್ರಜ್ವಲ್ (19) ಮೃತಪಟ್ಟ ಯುವಕ.

ಬೈಕ್ ವರ್ಕ್ಸ್ ಶೋಪ್ ನಲ್ಲಿ ದುಡಿಯುತ್ತಿದ್ದ ಪ್ರಜ್ವಲ್ ಗೆ ಶಾಕ್ ತಗಲಿದ್ದು , ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ವಿದ್ಯುತ್ ಕಂಬದಿಂದ ವಿದ್ಯುತ್ ವಯರನ್ನು ವಿಚ್ಚೇಧಿಸಿ ಯುವಕನನ್ನು ಉಪ್ಪಳದ ಆಸ್ಪತ್ರೆಗೆ ಕೊಂಡೊಯ್ದರೂ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News