×
Ad

ಮಡಿಕೇರಿ : ಹಾವು ಕಚ್ಚಿ ಬಾಲಕ ಮೃತ್ಯು

Update: 2024-02-26 19:49 IST

ದೇವಯ್ಯ (9) 

ಮಡಿಕೇರಿ : ಹಾವು ಕಚ್ಚಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಕೊಪ್ಪದಲ್ಲಿ ವರದಿಯಾಗಿದೆ.

ಸೂರ್ಲಬ್ಬಿ ಗ್ರಾಮದ ಅಡ್ಡಂಡ ಪೊನ್ನಪ್ಪ ಹಾಗೂ ಪವಿತ್ರ ದಂಪತಿಯ ಪುತ್ರ ದೇವಯ್ಯ (9) ಮೃತ ಬಾಲಕ. ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬಾಲಕನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ದೇವಯ್ಯ ಕುಶಾಲನಗರದ ಖಾಸಗಿ ಶಾಲೆಯ 3ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News