×
Ad

ಕೊಪ್ಪಳ: ಜಮೀನಿಗಾಗಿ ಜಗಳ; ಸಂಬಂಧಿಕನಿಂದಲೇ ಯುವಕನಿಗೆ ಚಾಕು ಇರಿತ

Update: 2024-10-16 11:03 IST

ಆರೋಪಿ ಮುತ್ತಣ್ಣ ಪೂಜಾರಿ

ಕೊಪ್ಪಳ: ಸಹೋದರ ಸಂಬಂಧಿಕರ ನಡುವೆ ಜಮೀನು ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಯುವಕನಿಗೆ ಚಾಕು ಇರಿದ ಘಟನೆ ಮಂಗಳವಾರ ರಾತ್ರಿ ಕುಕನೂರು ತಾಲೂಕಿನ ತಳಕಲ್ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಕೋಮಲಾಪುರ ಗ್ರಾಮದ ಗವಿಸಿದ್ದಪ್ಪ(30) ಚಾಕು ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ. ಅವರ ಸಹೋದರ ಸಂಬಂಧಿ ಮುತ್ತಣ್ಣ ಪೂಜಾರಿ (21) ಚಾಕುವಿನಿಂದ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

 ಚಾಕು ಇರಿದ ಪರಿಣಾಮ ಗಂಭಿರವಾಗಿ ಗಾಯಗೊಂಡಿರುವ ಗವಿಸಿದ್ದಪ್ಪನನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News