×
Ad

ಕೊಪ್ಪಳ | ಅಮಿತ್ ಶಾ ರನ್ನು ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಪ್ರತಿಭಟನೆ

Update: 2025-01-01 20:10 IST

ಕೊಪ್ಪಳ : ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಸಚಿವ ಸಂಪುಟದಿಂದ ವಜಾಗೊಳಿಸಲು ಒತ್ತಾಯಿಸಿ ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಮುಖಂಡರು ರಾಷ್ಟ್ರಪತಿ ಅವರಿಗೆ ತಹಶೀಲ್ದಾರ್ ವಿಠ್ಠಲ್ ಚೌಗಲ್ ಅವರ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

ನಗರದ ಅಶೋಕ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ನಂತರ ಪ್ರತಿಭಟನಾ ಮೆರವಣಿಗೆ ಪ್ರಾರಂಭಿಸಿ ಬಸವೇಶ್ವರ ವೃತ್ತಕ್ಕೆ ತೆರಳಿ ಕೋರೆಗಾವ್ ವಿಜಯೋತ್ಸವದ ಘೋಷಣೆ ಕೂಗಿದರು.

ಮನವಿಯಲ್ಲಿ ಸಂವಿಧಾನ ವಿರೋಧಿ ಬಿಜೆಪಿ, ಆರೆಸ್ಸೆಸ್ ತಮ್ಮ ಹಳೆಯ ಚಾಳಿ ಬಿಡದೆ ಮುಂದುವರಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಹೆಸರನ್ನು ಪದೇ ಪದೇ ಹೇಳುವುದೊಂದು ವ್ಯಸನ ಎಂದು ಸಂಸತ್ತಿನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿರುವುದನ್ನು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಖಂಡಿಸಿದರು.

ಅಮಿತ್ ಶಾರನ್ನು ಇದುವರೆಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲೇ ಉಳಿಸಿಕೊಂಡಿರುವುದು ಅವರ ಧೋರಣೆ ಏನು ಎಂಬುದರ ಸೂಚಕವಾಗಿದೆ. ಬಿಜೆಪಿ ಮತ್ತು ಆರೆಸ್ಸೆಸ್ ಎಂದೆಂದಿಗೂ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಸಂವಿಧಾನದ ವಿರೋಧ ಮಾಡುತ್ತಲೇ ಬಂದಿವೆ. ಆರೆಸ್ಸೆಸ್ ಪ್ರತಿನಿಧಿಸುವ ಬ್ರಾಹ್ಮಣವಾದದಿಂದ ನೋವಿನೊಳಗಾಗಿಯೇ ಬಾಬಾಸಾಹೇಬರು ’ಹಿಂದೂವಾಗಿ ಹುಟ್ಟಿರುವೆ. ಹಿಂದೂವಾಗಿ ಸಾಯುವುದಿಲ್ಲ’ ಎಂದು ಘೋಷಿಸಬೇಕಾಯಿತು ಎಂದರು.

ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು, ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್, ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಮಲ್ಲಿಕಾರ್ಜುನ್ ಹಲಗೇರಿ ಮುಂತಾದವರು ಮಾತನಾಡಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘದ ಹುಲುಗಪ್ಪ ಎಮ್, ಹ್ಯಾಟಿ, ಕೆ,ವಿ,ಎಸ್ ರಾಜ್ಯ ಉಪಾಧ್ಯಕ್ಷ ಕೆ, ದುರ್ಗೇಶ್, ಯಮುನಾ ಚಳ್ಳೂರು, ಯಮನೂರು ಇಳಿಗನೂರು, ಕೌಸರ್ ಕೋಲ್ಕಾರ್, ಕರ್ನಾಟಕ ಮಾದಿಗ ರಕ್ಷಣಾ ವೇದಿಕೆಯ ತಾಲೂಕಾ ಅಧ್ಯಕ್ಷ ಮಂಜುನಾಥ ಮಳ್ಳನವರ, ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಶಿವಕುಮಾರ್ ಡಿ, ನಡುವಿನಮನಿ, ಸುಭಾಷ್ ಎಮ್,ಹಕ್ಕಾಪುರ ಹನಕುಂಟಿ, ಸಂತೋಷ್ ಆರ್, ಕಳಸಣ್ಣವರ,ವೆಂಕಟೇಶ ಎಲ್, ಮಳ್ಳನವರ,ಯಮನೂರಪ್ಪ ಬಡ ಹಳ್ಳಿ,ಯಮನೂರಪ್ಪ ದೇವರಮನಿ,ಪ್ರವೀಣ್ ಎಚ್, ನಡುವಿನ ಮನಿ, ಬಸವರಾಜ್ ಬಿಕನಹಳ್ಳಿ, ಗುಡದಪ್ಪ ಎನ್, ಭಂಗಿ, ಕಾರ್ಮಿಕ ಸಂಘಟನೆ ಮುಖಂಡ ಬಸವರಾಜ್ ಪೂಜಾರ್ ನರೇಗಲ್, ಆಟೋ ಸಂಘಟನೆಯ ನಾಯಕ ಮಖಬೂಲ್ ರಾಯಚೂರು, ನಮ್ಮ ಕರ್ನಾಟಕ ಸೇನೆ ಜಿಲ್ಲಾಧ್ಯಕ್ಷ ಬಂದೆ ನವಾಝ ಮನಿಯಾರ್, ಟಿಯುಸಿಐ ರಾಜ್ಯ ಕಾರ್ಯದರ್ಶಿ ಕೆ,ಬಿ,ಗೋನಾಳ, ಸಂಜಿವಪ್ಪ ಬಿ,ಹೊಸಳ್ಳಿ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ, ಜಿಲ್ಲಾ ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ, ತಾಲ್ಲೂಕು ಅಧ್ಯಕ್ಷ ನೂರ ಸಾಬ್ ಹೊಸಮನಿ,ಕವಲೂರು ಗ್ರಾಮ ಘಟಕದ ಅಧ್ಯಕ್ಷ ಪಾನಿಶಾ ಮಕಾಂದಾರ್, ಶಮಶುದ್ದೀನ್ ಮಕಾಂದಾರ್, ಹನುಮಂತ ಹನುಮಸಾಗರ,ಮಹೆಬೂಬ್ ಅಲಿ,ಹುಸೇನ್ ಬಾಷಾ ತಹಶೀಲ್ದಾರ್,ರಾಜಪ್ಪ ಚೌಹಾಣ್, ಜಾಫರ್ ಕುರಿ,ಯೋಗೇಶ್ ಬಿಕನಹಳ್ಳಿ, ವೀರೇಶ್ ಲಕಮಾಪುರ್, ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ, ಗಾಳೆಪ್ಪ ಮುಂಗೊಲಿ, ಗಾಳೆಪ್ಪ ಬಿಕನಹಳ್ಳಿ, ನಜೀರ್ ಅಹ್ಮದ್ ಅಧೂನಿ, ಶೋಭಾ ಯಮನೂರಪ್ಪ, ಸಜ್ಜಾದ ಸಾಬ್ ಕವಲೂರ ಪಲ್ಟನ್ ಮುಂತಾದವರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News