×
Ad

ಡಿ.ಕೆ.ಶಿವಕುಮಾರ್ ಮುಖವಾಡದ ಸಿಎಂ : ಆರ್.ಅಶೋಕ್

Update: 2026-07-11 16:16 IST

ಮೈಸೂರು : ಡಿ.ಕೆ.ಶಿವಕುಮಾರ್ ಅವರು ಮುಖವಾಡದ ಸಿಎಂ ಆಗಿದ್ದಾರೆ. ಊರಿಗೆಲ್ಲ, ರಾಜ್ಯಕ್ಕೆಲ್ಲ ನಾಮ ಹಾಕುತ್ತಾರೆ. ಅವರಿಗೆ ಬಾಂಗ್ಲಾದೇಶವರು ಓಟ್ ಬ್ಯಾಂಕ್ ಆಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಹೇಳಿದರು.

ಮೈಸೂರಿನ ಜಿ.ಕೆ.ಗ್ರೌಂಡ್ಸ್ ನಲ್ಲಿ ಮೈಸೂರಿನ ಕಾಯಕ ಸಮುದಾಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ನ ನೂತನ ಸದಸ್ಯ ರಘು ಆರ್ ಕೌಟಿಲ್ಯ ಅವರ ಅಭಿನಂದನೆ ಹಾಗೂ ಭಾರತೀಯ ಜನತಾ ಪಾರ್ಟಿಗೆ ಕೃತಜ್ಞತಾ ಸಮಾವೇಶದಲ್ಲಿ ಅವರು ಮಾತನಾಡಿದರು.  

ರಘು ಕೌಟಿಲ್ಯ ಅವರಿಗೆ ಬಿಜೆಪಿ ವಿಧಾನ ಪರಿಷತ್‍ಗೆ ಅವಕಾಶ ನೀಡಿದೆ. ಹಿಂದುಳಿದ ಸಮುದಾಯಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಬೇಕು ಎಂಬುದು ಬಿಜೆಪಿ ಉದ್ದೇಶ. ಎಸ್‍ಐಆರ್‌ ನಲ್ಲಿ ಎಲ್ಲರೂ ಭಾಗವಹಿಸಬೇಕಿದೆ. ದೇಶದ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯಬೇಕು. ನಮ್ಮ ದೇಶದಲ್ಲಿ ಲಕ್ಷಾಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನಿಯರು ಇದ್ದಾರೆ. ಸರಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಮಮತಾ ಬ್ಯಾನರ್ಜಿ ಅವರು ಮೂರು ಸಾವಿರಕ್ಕೆ ಬಾಂಗ್ಲಾದೇಶದವರಿಗೆ ಎಲ್ಲ ಸೌಲಭ್ಯ ನೀಡಿದ್ದರು. ಕರ್ನಾಟಕದಲ್ಲಿ ಬಾಂಗ್ಲಾದೇಶದವರನ್ನು ಮತಪಟ್ಟಿಗೆ ಸೇರಿಸಲು ಹುನ್ನಾರ ನಡೆಯುತ್ತಿದೆ. ಅದಕ್ಕೆಂದೇ ಶಾಶ್ವತ ನಿವಾಸಿ ಪತ್ರ ನೀಡಲು ಮುಂದಾಗಿದ್ದಾರೆ. ಇದನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರಕಾರಕ್ಕೆ ಮಾತ್ರ ಪೌರತ್ವ ನೀಡುವ ಅಧಿಕಾರ ಹೊಂದಿದೆ ಎಂದರು.

ವಿಧಾನ ಪರಿಷತ್ತಿನ ವಿರೋಧಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ಅವರು ಮಾತನಾಡಿ, ಮೈಸೂರಿಗೆ ಮೆರುಗು ತಂದವರು ಕೃಷ್ಣರಾಜೇಂದ್ರ ಒಡೆಯರ್ ಅವರು. ಅವರ ಕುಟುಂಬವನ್ನು ಎಂದೂ ಮರೆಯಲಾಗದು. ಕಾಯಕ ಸಮುದಾಯಗಳು ಶ್ರಮಜೀವಿಗಳು. ಕಾಯಕವಿಲ್ಲದೆ ಜೀವನ ಇಲ್ಲ. ಆದ್ದರಿಂದ ಆಡಳಿತ ಮಾಡುವ ಸರಕಾರಗಳು ಕಾಯಕ ಸಮುದಾಯಕ್ಕೆ ಕೆಲಸ ಕೊಡಬೇಕು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News