×
Ad

ರಾಜ್ಯ ಸರಕಾರಕ್ಕೆ ಮಾಡಲು ಕೆಲಸವಿಲ್ಲದ್ದರಿಂದ ʼಕೋವಿಡ್ʼ ತನಿಖೆ ಮಾಡಿಸುತ್ತಿದೆ : ಯಡಿಯೂರಪ್ಪ

Update: 2024-12-08 19:31 IST

ಬಿ.ಎಸ್.ಯಡಿಯೂರಪ್ಪ

ಮೈಸೂರು : "ರಾಜ್ಯ ಸರಕಾರಕ್ಕೆ ಮಾಡಲು ಕೆಲಸವಿಲ್ಲ. ಹಾಗಾಗಿ ಕೋವಿಡ್ ತನಿಖೆ ಮಾಡಿಸುತ್ತಿದೆ" ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದರು.

ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರವಿವಾರ ಮೈಸೂರಿಗೆ ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

"ಸರಕಾರಕ್ಕೆ ಮಾಡಲು ಕೆಲಸವಿಲ್ಲ. ಹಾಗಾಗಿ ತನಿಖೆಗಳನ್ನು ಮಾಡಿಸುತ್ತಾ ಕುಳಿತಿದೆ. ಕೋವಿಡ್ ನಾಲ್ಕು ವರ್ಷಗಳ ಹಿಂದೆಯೇ ಆಗಿರುವ ವಿಚಾರ. ಸರಕಾರದವರು ಈಗ ತನಿಖೆ ಮಾಡಿಸುತ್ತೇವೆ ಎಂದು ಹೇಳುತ್ತಿದ್ದಾರೆ, ಮಾಡಿಸಲಿ ನೋಡೋಣ" ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News