ಹಣಕಾಸಿನಲ್ಲಿ ವಂಚನೆ: ದೂರು ದಾಖಲು
Update: 2026-03-05 22:54 IST
ಬ್ರಹ್ಮಾವರ, ಮಾ.5: ಶಿರಿಯಾರದ ಎಸ್.ಯೋಗೀಶ್ ಎಂಬವರ ಮಾಲಕತ್ವದ ವಿಶ್ವಂಬರ ಕ್ಯಾಶ್ಯೂ ಇಂಡಸ್ಟ್ರೀಸ್ನಲ್ಲಿ ಲೆಕ್ಕಪತ್ರ ಕಾರ್ಯನಿರ್ವಹಣೆ ಹಾಗೂ ದಾಸ್ತಾನು ಮೇಲ್ವಿಚಾರಕ ಹುದ್ದೆಯಲ್ಲಿದ್ದ ರತೀಶ್, ರಾಜೇಶ್ ಹಾಗೂ ಸುಮಂತ್ ಇವರು ಇತರ ಆರೋಪಿಗಳೊಂದಿಗೆ ಸೇರಿ 2023ರ ಎ.1ರಿಂದ 2025ರ ಮೇ 18ರ ಮಧ್ಯಾವಧಿಯಲ್ಲಿ ಸಂಸ್ಥೆಗೆ ಸಂಬಂಧಿಸಿದ 1,61,74,500ರೂ.ಗಳನ್ನು ಸ್ವಂತಕ್ಕೆ ಬಳಸಿಕೊಂಡು ವಂಚಿಸಿದ್ದಾರೆ ಎಂದು ಅವರ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.