×
Ad

ವಿದ್ಯುತ್ ಆಘಾತ: ಅಡಿಕೆ ಮರದಿಂದ ಬಿದ್ದು ಮೃತ್ಯು

Update: 2023-11-25 20:56 IST

ಶಂಕರನಾರಾಯಣ: ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ಆಘಾತಕ್ಕೆ ಒಳಗಾಗಿ ವ್ಯಕ್ತಿಯೊಬ್ಬರು ಮರದಿಂದ ಬಿದ್ದು ಮೃತ ಪಟ್ಟ ಘಟನೆ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ನ.25ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಹೈಕಾಡಿಯ ವಿಜಯ(46) ಎಂದು ಗುರುತಿಸಲಾಗಿದೆ. ಇವರು ಶಿಬು ಎಂಬವರ ಅಡಿಕೆ ತೋಟದಲ್ಲಿ ಅಡಿಕೆ ಕೊಯ್ಯೂತ್ತೀರುವಾಗ ಅಡಿಕೆ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಅಡಿಕೆ ಕೊಯ್ಯೂವ ಕೊಕ್ಕೆ ತಾಗಿತ್ತೆನ್ನಲಾ ಗಿದೆ. ಇದರಿಂದ ವಿದ್ಯುತ್ ಸ್ಪರ್ಶವಾಗಿ ವಿಜಯ್ ಅಡಿಕೆ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News