×
Ad

ಕಾರ್ಕಳ: ಬಾವಿ ಸ್ವಚ್ಛತೆಗೆ ಇಳಿದ ವ್ಯಕ್ತಿ ನೀರಲ್ಲಿ ಮುಳುಗಿ ಮೃತ್ಯು

Update: 2024-11-17 16:00 IST

ಸಾಂದರ್ಭಿಕ ಚಿತ್ರ 

ಕಾರ್ಕಳ, ನ.17: ಸ್ವಚ್ಛ ಮಾಡಲು ಬಾವಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟ ಘಟನೆ ನ.16ರಂದು ಕಾರ್ಕಳದ ಆನೆಕೆರೆ ಎಂಬಲ್ಲಿ ನಡೆದಿದೆ.

ಮೃತರನ್ನು ಹಿರಿಯಡ್ಕ ಕುಕ್ಕೆಹಳ್ಳಿಯ ರಾಜೀವ(62) ಎಂದು ಗುರುತಿಸಲಾಗಿದೆ. ಇವರು ಆನೆಕೆರೆಯ ವಾಸುದೇವ ಬೆಳುವಾಯಿ ಎಂಬವರಿಗೆ ಸೇರಿದ ಮನೆಯ ಬಾವಿಯ ಕಸ ತೆಗೆಯಲು ಇಳಿದಿದ್ದು, ಬಾವಿಯಲ್ಲಿ ಕೆಲಸ ಮಾಡುವ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಾಸುದೇವ ಯಾವುದೇ ಮುಂಜಾಗ್ರತ ಕ್ರಮ ವಹಿಸದೇ ರಾಜೀವರನ್ನು ಬಾವಿಗೆ ಇಳಿಸಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News