×
Ad

ಕಾರ್ಕಳ: ಆರ್ಮಿ ಆಫೀಸರ್ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ಸಾವಿರಾರು ರೂ. ವಂಚನೆ

Update: 2023-09-18 11:13 IST
ಸಾಂದರ್ಭಿಕ ಚಿತ್ರ

ಕಾರ್ಕಳ: ಆರ್ಮಿ ಕ್ಯಾಂಪಿಗೆ ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವ ಹೆಸರಿನಲ್ಲಿ ಗ್ಯಾಸ್ ಏಜೆನ್ಸಿಗೆ ಸಾವಿರಾರು ರೂಪಾಯಿ ವಂಚನೆ ಎಸೆಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಾರ್ಕಳ ತೆಳ್ಳಾರು ರಸ್ತೆಯಲ್ಲಿರುವ ಪ್ರಿಯದರ್ಶಿನಿ  ಗ್ಯಾಸ್ ಏಜೆನ್ಸಿ ಮಾಲಕ ಕೃಷ್ಣಮೂರ್ತಿ ಎಂಬವರಿಗೆ  ಸೆ.9ರಂದು  ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ , ಕಾರ್ಕಳ ಮಾಳ  ಕೂಡಬೆಟ್ಟು  ಶಾಲೆಯಲ್ಲಿ  ಆರ್ಮಿ ಕ್ಯಾಂಪ್  ಮಾಡಿದ್ದು  ಈ  ಕ್ಯಾಂಪ್‌ಗೆ  4 ಗ್ಯಾಸ್ ಸಿಲಿಂಡರ್   ಸರಬರಾಜು ಮಾಡುವಂತೆ  ಕೇಳಿದ್ದನು.

ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ತನ್ನ ಕಚೇರಿಯಲ್ಲಿ ಕೆಲಸ ಮಾಡುವ ಸುನೀಲ್‌ ವಿನ್ಸೆಂಟ್‌ ಮೆನೆಝೆಸ್ ಗೆ  ಆ ವ್ಯಕ್ತಿಯನ್ನು ಸಂಪರ್ಕಿಸುವಂತೆ ತಿಳಿಸಿದರು. ಅದರಂತೆ ಸುನೀಲ್‌ ಕರೆ ಮಾಡಿ  ಗ್ಯಾಸ್ ಸರಬರಾಜು   ಮಾಡುವ  ಬಗ್ಗೆ ವಿಚಾರಿಸಿದಾಗ, ಮೊದಲು ವೆರಿಫೈಗೆಂದು ನೀವು ನಮಗೆ ಹಣ ಹಾಕಬೇಕು, ನಂತರ  ತಾವು  ದುಪ್ಪಟ್ಟು  ಹಣವನ್ನು  ವಾಪಾಸು ಕೊಡುತ್ತೇವೆಂದು ಆತ ತಿಳಿಸಿದನು.

ಅದನ್ನು ನಂಬಿದ ಸುನಿಲ್ ಹಂತಹಂತವಾಗಿ ಒಟ್ಟು 92,513ರೂ. ಹಣವನ್ನು ಆರೋಪಿಯ ಖಾತೆಗೆ ಆನ್ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆ ವ್ಯಕ್ತಿ ಇಂಡಿಯನ್ ಆರ್ಮಿಯ  ಆಫೀಸರ್  ಎಂದು  ನಂಬಿಸಿ  ಹಣವನ್ನು   ವರ್ಗಾವಣೆ  ಮಾಡಿಸಿಕೊಂಡು,  ಹಣವನ್ನು   ವಾಪಾಸು ನೀಡದೇ   ಮೋಸ  ಮಾಡಿರುವುದಾಗಿ ದೂರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News