×
Ad

ಕುಂದಾಪುರ | ಶ್ರಮನೀತಿ -2025ರ ಕರಡು ಪ್ರತಿ ದಹಿಸಿದ ಹಂಚು ಕಾರ್ಮಿಕರು !

Update: 2025-11-26 21:32 IST

ಕುಂದಾಪುರ, ನ.26: ಕುಂದಾಪುರ ಹಂಚು ಕಾರ್ಖಾನೆಗಳಲ್ಲಿ ಬುಧವಾರ ಹಂಚು ಕಾರ್ಮಿಕರು ಕೆಲಸ ಆರಂಭಕ್ಕೂ ಮುನ್ನ ಕಾರ್ಖಾನೆ ದ್ವಾರಗಳಲ್ಲಿ ಶ್ರಮಶಕ್ತಿ ನೀತಿ -2025ರ ಕರಡು ಪ್ರತಿಯನ್ನು ದಹಿಸಿ ಪ್ರತಿಭಟಿಸಿದರು.

ಮಂಗಳೂರು ಟೈಲ್ಸ್ ನಲ್ಲಿ ಉಡುಪಿ ಜಿಲ್ಲಾ ಹಂಚು ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ನರಸಿಂಹ ಮಾತನಾಡಿ, ಶ್ರಮಶಕ್ತಿ ನೀತಿ -2025 ಅನ್ನು 300 ಮಂದಿ ಕಾರ್ಮಿಕರು ಒಳಗೆ ಇರುವ ಕಾರ್ಖಾನೆಗಳನ್ನು ಮಾಲಕರು ಯಾವುದೇ ಸಮಯದಲ್ಲಿ ಸರಕಾರದ ಅನುಮತಿ ಇಲ್ಲದೆ ಬಂದ್ ಮಾಡಲು ಅವಕಾಶ ನೀಡುತ್ತದೆ. ಇದು ಬಹಳ ಅಪಾಯಕಾರಿಯಾಗಿದೆ ಎಂದರು.

ಕಾರ್ಮಿಕರಿಗೆ ಅನ್ಯಾಯ ಮಾಲಕರಿಂದ ಆದಾಗ ಪ್ರತಿಭಟಿಸಿದರೆ ಅದು ಅಪರಾಧ ಎಂದು ಈ ಸಂಹಿತೆ ಹೇಳುತ್ತದೆ. ಕಾರ್ಮಿಕ ನಿರೀಕ್ಷಕರು ಕಾರ್ಮಿಕ ರಕ್ಷಣೆಗೆ ಕಾರ್ಖಾನೆಯೊಳಗೆ ಅವರ ಸುರಕ್ಷೆ ಬಗ್ಗೆ ಪರಿಶೀಲಿಸುವಂತಿಲ್ಲ. ಈ ಎಲ್ಲಾ ಕಾರಣಗಳಿಗಾಗಿ ಶ್ರಮಶಕ್ತಿ -2025 ಕಾರ್ಮಿಕರ ಪಾಲಿನ ಮರಣ ಶಾಸನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂ ಕಾರ್ಖಾನೆಯಲ್ಲಿ ಸಿಐಟಿಯು ಮುಖಂಡರಾದ ಸುರೇಂದ್ರ ಎಚ್., ಗಣಪ, ಗ್ರೀನ್ಲ್ಯಾಂಡ್ ಕಾರ್ಖಾನೆಯಲ್ಲಿ ಚಂದ್ರ ಪೂಜಾರಿ, ಪ್ರಭಾಕಿರಣ ಕಾರ್ಖಾನೆಯಲ್ಲಿ ಪಂಜು ಪೂಜಾರಿ ಗುಲ್ವಾಡಿ, ನಾಗರಾಜ, ಭಾಸ್ಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News