ಉಡುಪಿಯಲ್ಲಿ ನೇಪಾಳಿ ಬಾಲಕ ಆತ್ಮಹತ್ಯೆ
Update: 2025-12-22 22:00 IST
ಉಡುಪಿ, ಡಿ.22: ವೈಯಕ್ತಿಕ ಕಾರಣದಿಂದ ಮನನೊಂದ ನೇಪಾಳಿ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.21ರಂದು ರಾತ್ರಿ ವೇಳೆ 76 ಬಡಗುಬೆಟ್ಟು ಗ್ರಾಮದ ಚಂದು ಮೈದಾನದ ಬಳಿ ನಡೆದಿದೆ.
ಮೃತರನ್ನು ನೇಪಾಳ ದೇಶದ, ಪ್ರಸ್ತುತ ಚಂದು ಮೈದಾನದ ಬಳಿ ಬಾಡಿಗೆ ಮನೆ ನಿವಾಸಿ ಪದಮ್ ಬಹದೂರ್ ಎಂಬವರ ಮಗ ಸಂಜಯ್ ಎಂದು ಗುರುತಿಸಲಾಗಿದೆ. ಈತ ರಾತ್ರಿ ಮನೆಯ ಹಿಂಬದಿಯ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.