ಕುದುರೆ ಏರಿ ಬಂದ ಮತದಾರ!
Update: 2024-04-26 12:43 GMT
ಕಾರ್ಕಳ: ಕಾರ್ಕಳದಲ್ಲಿ ಮತದಾರರೊಬ್ಬರು ಕುದುರೆಯನ್ನೇರಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
ಅಂತಾರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರ ಪುತ್ರ ಏಕಲವ್ಯ ಆರ್.ಕಟೀಲ್ ತಾನು ಸಾಕಿದ ಕುದುರೆಯನ್ನು ಏರಿ ಕಾರ್ಕಳ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿರುವ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದರು.