ಬಂಟಕಲ್: ಎಂಬಿಎ ವಿದ್ಯಾರ್ಥಿಗಳಿಂದ ಫುಡ್ ಪೆಸ್ಟ್
Update: 2024-05-27 20:46 IST
ಶಿರ್ವ, ಮೇ 27: ಬಂಟಕಲ್ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ಎಂಬಿಎ ವಿದ್ಯಾರ್ಥಿಗಳಿಗೆ ಬೆಂಕಿುಲ್ಲದೆ ಅಡುಗೆ ಎಂಬ ರ್ಶೀಕೆಯಡಿ ಫುಡ್ ಪೆಸ್ಟ್ ಅನ್ನು ಮೇ 25ರಂದು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಉದ್ಘಾಟಿಸಿದರು. ವಿದ್ಯಾರ್ಥಿಗಳ ಪಾಕ ಪ್ರಾವಿಣ್ಯತೆ, ವ್ಯವಹಾರ ಕೌಶಲ್ಯ, ಉದ್ಯಮಶೀಲತೆ, ಮಾರುಕಟ್ಟೆ, ಲೆಕ್ಕಪತ್ರ ನಿರ್ವಹಣೆ ಮತ್ತು ಹಣಕಾಸು ವ್ಯವಹಾರದ ಬಗ್ಗೆ ತಿಳಿಸಿಕೊಡುವುದು ಈ ಫೆಸ್ಟ್ನ ಉದ್ದೇಶವಾಗಿದೆ.
ಈ ಫುಡ್ಪೆಸ್ಟ್ನಲ್ಲಿ 4 ವಿದ್ಯಾರ್ಥಿಗಳಂತೆ ಒಟ್ಟು 5 ತಂಡಗಳು ಭಾಗವಹಿಸಿದ್ದು, ವಿವಿಧ ಬಗೆಯ ಸಿಹಿ ತಿಂಡಿಗಳು ಮತ್ತು ಪಾನೀಯಗಳನ್ನು ತಯಾರಿಸಿದ್ದರು. ಎಂಬಿಎ ವಿಭಾಗದ ನಿರ್ದೇಶಕ ಡಾ.ಸೂರಜ್ ಪ್ರಾನ್ಸಿಸ್ ನೊರೊನ್ಹಾ, ಡೀನ್ಗಳು, ವಿವಿಧ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.