×
Ad

ವಿದ್ಯುತ್ ಶಾಕ್: ಕೂಲಿ ಕಾರ್ಮಿಕ ಮೃತ್ಯು

Update: 2025-06-29 21:22 IST

ಅಜೆಕಾರು, ಜೂ.29: ವಿದ್ಯುತ್ ಶಾಕ್‌ನಿಂದ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಕೈಕಂಬ ಉರ್ಕಲು ಎಂಬಲ್ಲಿ ಜೂ.29ರಂದು ಬೆಳಗ್ಗೆ 11.30ರ ಸುಮಾರಿಗೆ ನಡೆದಿದೆ.

ಮೃತರನ್ನು ಎಣ್ಣೆಹೊಳೆ ಮರ್ಣೆಯ ಸುಧಾಕರ (34) ಎಂದು ಗುರುತಿಸಲಾಗಿದೆ. ಇವರು ಬೆಳಗ್ಗೆ ಮನೆಯಿಂದ ಉರ್ಕಲುಗೆ ಕೆಲಸಕ್ಕೆಂದು ಹೋಗಿದ್ದು, ಅಲ್ಲಿ ಅವರು ವಿದ್ಯುತ್ ಕಂಬದ ಬಳಿ ಆಕಸ್ಮಿಕವಾಗಿ ಜಿ.ಓ.ಎಸ್ ನ್ನು ಮುಟ್ಟಿದ್ದರೆನ್ನಲಾಗಿದೆ. ಇದರಿಂದ ವಿದ್ಯುತ್ ಶಾಕ್ ಹೊಡೆದು ಗಂಭೀರ ವಾಗಿ ಗಾಯ ಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News