×
Ad

ರಿಕ್ಷಾದಿಂದ ಬಿದ್ದು ಪ್ರಯಾಣಿಕ ಮೃತ್ಯು

Update: 2023-07-21 21:05 IST

ಕೋಟ, ಜು.21: ರಸ್ತೆಯಲ್ಲಿನ ಹೊಂಡ ತಪ್ಪಿಸುವ ಭರದಲ್ಲಿ ಆಟೋ ರಿಕ್ಷಾ ವನ್ನು ಒಮ್ಮೇಲೆ ತಿರುಗಿಸಿದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಯೊಬ್ಬರು ಹೊರಗೆ ಬಿದ್ದು ಮೃತಪಟ್ಟ ಘಟನೆ ಜು.20ರಂದು ರಾತ್ರಿ 8.30ರ ಸುಮಾರಿಗೆ ಮಣೂರು ಗ್ರಾಮದ ವಿನಾಯಕ ಅಟೋ ವರ್ಕ್ ಎದುರು ನಡೆದಿದೆ.

ಮೃತರನ್ನು ಪ್ರಕಾಶ ಪೂಜಾರಿ(41) ಎಂದು ಗುರುತಿಸಲಾಗಿದೆ. ಇವರು ಕೋಟೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ತಾಯಿಗೆ ಊಟ ತೆಗೆದುಕೊಂಡು ಚಂದ್ರ ಎಂಬವರ ಆಟೋ ರಿಕ್ಷಾದಲ್ಲಿ ಹೋಗಿದ್ದು, ಈ ವೇಳೆ ರಿಕ್ಷಾ ಚಾಲಕ ರಸ್ತೆಯಲ್ಲಿನ ಹೊಂಡ ತಪ್ಪಿಸುವ ಭರದಲ್ಲಿ ರಿಕ್ಷಾವನ್ನು ಒಮ್ಮೇಲೆ ತಿರುಗಿಸಿದ ರೆನ್ನಲಾಗಿದೆ.

ಇದರ ಪರಿಣಾಮ ರಿಕ್ಷಾದಲ್ಲಿ ಕುಳಿತಿದ್ದ ಪ್ರಕಾಶ್ ರಿಕ್ಷಾದಿಂದ ಆಯತಪ್ಪಿ ಹೊರಗೆ ರಸ್ತೆಗೆ ಬಿದ್ದು ತಲೆಗೆ ತೀವ್ರತರದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News