×
Ad

ಶಿರ್ವ: ಅಕ್ಕಿ ಮಿಲ್ಲಿನ ಬಿಸಿ ನೀರಿಗೆ ಬಿದ್ದು ಮಹಿಳೆ ಮೃತ್ಯು

Update: 2026-01-19 14:02 IST

ಉಡುಪಿ, ಜ.19: ಅಕ್ಕಿ ಮಿಲ್ಲಿನಲ್ಲಿ ಭತ್ತದ ಬೊಬ್ಬೆ ತೆಗೆಯುವ ವೇಳೆ ಆಕಸ್ಮಿಕವಾಗಿ ಬಿಸಿನೀರಿಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬಂಟಕಲ್ಲು ಸಡಂಬೈಲು ಎಂಬಲ್ಲಿ ನಡೆದಿದೆ.

ಮೃತರನ್ನು ಬಂಟಕಲ್ಲು ಸಡಂಬೈಲು ನಿವಾಸಿ ರೋಹಿಣಿ ಪುಷ್ಪಲತಾ(53) ಎಂದು ಗುರುತಿಸಲಾಗಿದೆ. ತನ್ನ ಗಂಡನ ಮನೆಯಲ್ಲಿರುವ ಅಕ್ಕಿಮಿಲ್ಲಿನಲ್ಲಿ ಇವರು ಕೆಲಸ ಮಾಡಿ ಕೊಂಡಿದ್ದು, ಡಿ.24ರಂದು ಬಿಸಿ ನೀರಿನಿಂದ ಭತ್ತದ ಬೊಬ್ಬೆ ತೆಗೆಯುವ ವೇಳೆ ಅಕಸ್ಮಿಕವಾಗಿ ಆಯತಪ್ಪಿ ಬಿಸಿ ನೀರಿಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಸುಟ್ಟ ಗಾಯಗೊಂಡ ಅವರು, ಜ.18ರಂದು ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ತಿಳಿದು ಬಂದಿದೆ.

ಈ ಬಗ್ಗ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News