×
Ad

Udupi | ತೋನ್ಸೆ ಹೆಲ್ತ್ ಸೆಂಟರ್‌ನಲ್ಲಿ ಸದ್ಭಾವನಾ ದಿನಾಚರಣೆ

Update: 2026-07-03 21:15 IST

ಉಡುಪಿ : ತೋನ್ಸೆ ಹೆಲ್ತ್ ಸೆಂಟರ್ ಹೊಡೆ ವತಿಯಿಂದ ವೈದ್ಯರ ದಿನಾಚರಣೆ ಪ್ರಯುಕ್ತ ಸದ್ಭಾವನಾ ದಿನವನ್ನು ಆಚರಿಸಲಾಯಿತು.

ಇತ್ತೀಚೆಗೆ ದೆಹಲಿ ಗ್ಲೋಬಲ್ ಎಚಿವರ್ಸ್ ಕೌನ್ಸಿಲ್ ವತಿಯಿಂದ ಭಾರತ ರತ್ನ ಡಾ.ಅಬ್ದುಲ್ ಕಲಾಂ ಸದ್ಭಾವನಾ ಅವಾರ್ಡ್ ಸಂಸ್ಥೆಯ ಸಂಸ್ಥಾಪಕ ಬಿ.ಎಂ.ಜಾಫರ್ ಪಡೆದಿರುವ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಯೊಂದಿಗೆ ಆಚರಿಸಲಾಯಿತು.

ಭಾರತೀಯ ಸೇನಾ ನಿವೃತ ಯೋಧ ಆರ್.ಮೂರ್ತಿ, ಬೆಂಗಳೂರು ಹಾಗೂ ಕೆಮ್ಮಣ್ಣು ಖಂಡಾಲ ಮನೆಯ ಹಿರಿಯರಾದ ರಘುರಾಮ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಹಿರಿಯ ಮುಂದಾಳು ಜನಾರ್ದನ ತೋನ್ಸೆ ವಹಿಸಿದ್ದರು.

ಅತಿಥಿಗಳಾಗಿ ಪೆಪ್ಕೋ ಇಂಜಿನಿಯರಿಂಗ್ ಶಾರ್ಜಾ ಇದರ ಮುಖ್ಯಸ್ಥ ಅಬ್ದುಲ್ ವಾಹಿದ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಮೇಶ್ ತಿಂಗಳಾಯ, ರಮೇಶ್ ಕಾಮತ್, ಕೆಮ್ಮಣ್ಣು ಪಂಚಾಯತ್ ಮಾಜಿ ಅಧ್ಯಕ್ಷೆ ಕುಸುಮಾ, ಸೈಮ್ ಗ್ರೂಪಿನ ಎಂಜಿನಿಯರ್ ಇಮ್ತಿಯಾಜ್, ಜಿ.ಅಶ್ರಫ್, ತಾಲೂಕು ಪಂಚಾಯತ್ ಸದಸ್ಯೆ ಸುಲೋಚನಾ, ಡಾ.ವೆಂಕಟೇಶ್ ಬೆಂಗಳೂರು, ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಶ್ರುತಿ, ಡಾ.ಜುಮಾನಾ ಜಾಫರ್, ಸಂಸ್ಥೆಯ ಹಿರಿಯ ಲೆಕ್ಕಾಧಿಕಾರಿ ಟಿ.ಅಬ್ಬಾಸ್ ಸಾಹೇಬ್ ಉಪಸ್ಥಿತರಿದ್ದರು. ಸಂಸ್ಥೆಯ ಮ್ಯಾನೇಜರ್ ಹರೀಶ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News