×
Ad

ಪುಸ್ತಕಗಳು ಅರಿವಿನ ಸಂಕೇತ ಮತ್ತು ಜ್ಞಾನದ ಬುನಾದಿಯಾಗಿವೆ: ಮಾನಸ

Update: 2025-12-27 22:11 IST

ಯಾದಗಿರಿ: 'ಪುಸ್ತಕಗಳಿಗೆ ಮಾನ್ಯತೆ ನೀಡಿದರೆ, ಮನೆ ಮತ್ತು ಮನಗಳ ಸಂಸ್ಕಾರವನ್ನು ಬದಲಿಸುತ್ತವೆ' ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜರುಗುದ ಮನೆಗೊಂದು ಗ್ರಂಥಾಲಯ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾನಸ, ಪುಸ್ತಕಗಳು ಅರಿವಿನ ಸಂಕೇತ ಮತ್ತು ನಮ್ಮ ಜ್ಞಾನದ ಬುನಾದಿಯಾಗಿವೆ. ಮನೆಗೊಂದು ಗ್ರಂಥಾಲಯ ಅಭಿಯಾನವು ಯುವ ಸಮುದಾಯಕ್ಕೆ ತಲುಪಿಸಬೇಕು' ಎಂದು ಹೇಳಿದರು.

2025ರ ಜನವರಿಯಲ್ಲಿ ಮುಖ್ಯಮಂತ್ರಿಗಳ ಮನೆಯಲ್ಲಿ ಲಕ್ಷ ಗ್ರಂಥಾಲಯಗಳ ಯೋಜನೆಯ ಮೊದಲ ಗ್ರಂಥಾಲಯ ಸ್ಥಾಪನೆಗೊಂಡಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಸಚಿವರು, ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರ ಮನೆಗಳಲ್ಲೂ ಚಲನಚಿತ್ರ, ಕಿರುತೆರೆ ನಟರ ಮನೆಗಳಲ್ಲೂ ಇದು ಅಸ್ತಿತ್ವಕ್ಕೆ ಬರಲಿದೆ' ಎಂದು ತಿಳಿಸಿದರು.

ಸಾಮಾನ್ಯರಿಂದ ಪುಸ್ತಕಗಳನ್ನು ತರಿಸಿ, ಅವರಿಷ್ಟದ ಸಾಹಿತಿಗಳಿಂದ ಗ್ರಂಥಾಲಯ ಉದ್ಘಾಟಿಸಿ, ಪ್ರಾಧಿಕಾರದ ಗ್ರಂಥಾಲಯ ಅನುಷ್ಠಾನ ಪತ್ರವನ್ನು ನೀಡಲಾಗುವುದು' ಎಂದು ವಿವರಿಸಿದರು. ಅಭಿಯಾನ ಉತ್ತೇಜಿಸಲು ನಂಜನಗೂಡು ತಿರುಮಲಾಂಬ, ಹಾ.ಮಾ.ನಾಯಕ, ಪಿ.ಆರ್.ತಿಪ್ಪೇಸ್ವಾಮಿ ಹಾಗೂ ಗಳಗನಾಥರ ಹೆಸರಲ್ಲಿ ನಾಲ್ಕೂ ಕಂದಾಯ ವಿಭಾಗಗಳಲ್ಲಿ ಪ್ರಶಸ್ತಿ ಸ್ಥಾಪಿಸಲು ಚಿಂತಿಸಲಾಗಿದೆ' ಎಂದು ಹೇಳಿದರು.

ಈ ವೇಳೆ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎ.ಡಿ ಉತ್ತರಾದೇವಿ ಮಠಪತಿ, ಶಹಾಪುರ ತಾಲೂಕು ಕಸಾಪ ಅಧ್ಯಕ್ಷ ರವಿಂದ್ರನಾಥ ಹೊಸಮನಿ ಹಾಗೂ ಪುಸ್ತಕ ಪ್ರಾಧಿಕಾರದ ಶ್ರೀನಿವಾಸ ಕರಿಯಪ್ಪನವರ, ಜಾಗೃತಿ ವೇದಿಕೆ ಜಿಲ್ಲಾ ಸಂಚಾಲಕ ಪ್ರಕಾಶ ಅಂಗಡಿ ಕನ್ನಳ್ಳಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News