ಯಾದಗಿರಿ | ಸಮಾಜದ ಏಳಿಗೆಗೆ ಎಲ್ಲರೂ ಒಂದಾಗಿ ಕೆಲಸ ಮಾಡೋಣ : ಚನ್ನಪ್ಪಗೌಡ ಮೋಸಂಬಿ
ಸುರಪುರ : ಜಿಲ್ಲೆಯಲ್ಲಿ ವೀರಶೈವ ಲಿಂಗಾಯತ ಸಮಾಜದ ಏಳಿಗೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡೋಣ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಹೇಳಿದರು.
ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ರಾಜ್ಯದಾದ್ಯಂತ ಶಂಕರ ಬಿದರಿ ಅವರ ನೇತೃತ್ವದಲ್ಲಿ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದ್ದು,ತಾಲೂಕಿನಲ್ಲಿ ಇಂದು ನೂತನವಾಗಿ ನೇಮಕಗೊಂಡ ಎಲ್ಲ ಪದಾಧಿಕಾರಿಗಳು ಪ್ರಕಾಶ ಅಂಗಡಿ ಅವರ ನೇತೃತ್ವದಲ್ಲಿ ಉತ್ತಮವಾಗಿ ಸಮಾಜದ ಕೆಲಸ ಮಾಡುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ತಾಲೂಕು ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ ಸುರೇಶ ಸಜ್ಜನ್, ತಾಲೂಕು ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ನಂತರ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಜಿಲ್ಲಾಧ್ಯಕ್ಷ ಚನ್ನಪ್ಪ ಮೋಸಂಬಿ ಅವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಮುಖಂಡ ಮಲ್ಲಣ ಸಾಹುಕಾರ ನರಸಿಂಗಪೇಟ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖಂಡರಾದ ಶಿವಶರಣಪ್ಪ ಹೆಡಗಿನಾಳ, ಚನ್ನಯ್ಯಸ್ವಾಮಿ ಜೇಟಗಿಮಠ, ಶಿವು ಸಾಹುಕಾರ ಸೂಗೂರ, ಚೆನ್ನಪ್ಪಗೌಡ ಜಕ್ಕನಗೌಡ್ರ ದೇವಾಪುರ, ಸಿದ್ದಣ್ಣ ಮುಧೋಳ, ನೀಲಾಂಬಿಕಾ ಪಾಟೀಲ್, ಸುನೀತಾ ಪಾಟೀಲ್, ರವಿ ಸೊನ್ನದ್, ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ, ರವಿಗೌಡ ಹೆಮನೂರ, ಪ್ರಕಾಶ ಬಣಗಾರ, ಶರಣಬಸವ ಹೂಗಾರ, ಆನಂದ ಮಡ್ಡಿ, ವೀರಭಧ್ರಪ್ಪ ಸತ್ಯಂಪೇಟ, ಅಶೋಕ ಶೆಳ್ಳಗಿ, ಮಡಿವಾಳಪ್ಪ ಪಾಟೀಲ್ ಹೆಗ್ಗಣದೊಡ್ಡಿ, ಮಲ್ಲಿಕಾರ್ಜುನ ಮುಧೋಳ, ಮಲ್ಲು ಬಾದ್ಯಾಪುರ, ಬಸನಗೌಡ ಸೂಗೂರ, ಅಭಿಷೇಕ ಹೊನಕಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪದಾಧಿಕಾರಿಗಳ ಆಯ್ಕೆ :
ಶಿಲ್ಪಾ ಆವಂಟಿ (ಮಹಿಳಾ ಘಟಕ), ಕೃಷ್ಣಾರೆಡ್ಡಿ ಹೊಸಮನಿ ಮುದನೂರ (ತಾ.ಯುವ ಘಟಕದ ಅಧ್ಯಕ್ಷ), ವೀರೇಶ ಪಂಚಾಂಗಮಠ (ನಗರ ಘಟಕದ ಅಧ್ಯಕ್ಷ), ಶರಬಣ್ಣ ಹೊಸಮನಿ (ನಗರ ಯುವ ಘಟಕ ಅಧ್ಯಕ್ಷ).
ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಸಭಾ ಸುರಪುರದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ಅಥವಾ ಬೇರೆ ಯಾವುದೇ ಕಟ್ಟಡ ನಿರ್ಮಾಣಕ್ಕೆ 30 ಗುಂಟೆ ಜಾಗ ನೀಡಲು ಸಮಿತಿ ಸಭೆಯಲ್ಲಿ ಒಪ್ಪಿಗೆ ಪಡೆದು ನೀಡಲಾಗುವುದು.
ಸುರೇಶ ಸಜ್ಜನ್, ತಾ.ವೀರಶೈವ ಲಿಂಗಾಯತ ಸಮಿತಿ ಅಧ್ಯಕ್ಷ