×
Ad

ಸುರಪುರ: ಉದ್ಯೋಗ ನೇಮಕದಲ್ಲಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮನವಿ

Update: 2026-03-06 22:41 IST

ಸುರಪುರ: ಸರ್ಕಾರ ಉದ್ಯೋಗಗಳ ನೇಮಕಾತಿಯಲ್ಲಿ ಒಳ ಮೀಸಲು ಅನುಗುಣವಾಗಿ ನೇಮಕಗೊಳಿಸುವಂತೆ ಆಗ್ರಹಿಸಿ ಮಾದಿಗ ಸಮಾಜದ ವಿವಿಧ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದರು.

ಪಟ್ಟಣದ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರ ಗೃಹ ಕಚೇರಿಯ ಮುಂಭಾಗದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಒಕ್ಕೂಟದ ಮುಖಂಡರು, ಉದ್ಯೋಗಗಳ ನೇಮಕಾತಿಯಲ್ಲಿ ಒಳಮೀಸಲಾತಿ ಜನಗಣತಿ ಅನುಗುಣವಾಗಿ ಮಾಡಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಬಜೆಟ್ ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಜಾರಿ ಮಾಡಬೇಕು, ರಾಜ್ಯದಲ್ಲಿ ಕೊಲೆ ಸುಲಿಗೆ ಮಹಿಳೆಯರ ಮೇಲೆ ಅತ್ಯಾಚಾರ ಶೋಷಣೆಗೆ ಒಳಗಾದ ಕುಟುಂಬಸ್ಥರಿಗೆ ಸರ್ಕಾರ ಶೀಘ್ರದಲ್ಲಿ ಪರಿಹಾರ ನೀಡಿ ಸೂಕ್ತ ರಕ್ಷಣೆ ನೀಡಬೇಕು, ರಾಜ್ಯದಲ್ಲಿನ ಬಡ ವಿದ್ಯಾರ್ಥಿಗಳಿಗೆ ತರಗತಿ ವರು ಶಿಷ್ಯವೇತನವನ್ನು ಹೆಚ್ಚಿಸಬೇಕು ಹಾಗೂ ರಾಜ್ಯದಲ್ಲಿರುವ ಎಸ್.ಸಿ,ಎಸ್.ಟಿ ಬಡ ಕುಟುಂಬಗಳಿಗೆ ವಸತಿ ಯೋಜನೆಯಲ್ಲಿ ಮನೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಲ್ಪಿಸಬೇಕೆಂದು ಆಗ್ರಹಿಸಿದರು.

ಅಲ್ಲದೆ ಕಳೆದ ಕೆಲವು ವರ್ಷಗಳಲ್ಲಿ 40,000ಕ್ಕೂ ಹೆಚ್ಚು ಉದ್ಯೋಗ ನೇಮಕಾತಿಗಳು ವರ್ಗೀಕರಣವಿಲ್ಲದೆ ನಡೆದಿವೆ ಈಗ ಕರ್ನಾಟಕ ರಾಜ್ಯದಲ್ಲಿ 2.85 ಲಕ್ಷ ಹುದ್ದೆಗಳು ಖಾಲಿ ಇವೆ ಇದರಲ್ಲಿ 56,432 ಹುದ್ದೆಗಳನ್ನು ಹಳೆ ಮೀಸಲಾತಿ ಅನುಸರಿಸಿ ನೇಮಕ ಮಾಡುವಲ್ಲಿ ಮೋಸ ವಂಚಿಸುವ ರಾಜಕೀಯ ನಡೆದಿದ್ದು ಇದರಿಂದ ಒಳಮೀಸಲಾತಿಯಲ್ಲಿ ಬರುವ ಪರಿಶಿಷ್ಟ ಜಾತಿಯವರಿಗೆ ತುಂಬಾ ಅನ್ಯಾಯವಾಗುತ್ತದೆ ಆದ್ದರಿಂದ ಇದನ್ನು ಸರಿಪಡಿಸದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಂತರ ಮುಖ್ಯಮಂತ್ರಿ ಗೆ ಬರೆದ ಮನವಿ ಶಾಸಕರ ಆಪ್ತ ಸಹಾಯಕ ಶಿವರಾಜ ನಾಯಕ ಮೂಲಕ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಸಾಮೂಹಿಕ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ದಾನಪ್ಪ ಕಡಿಮೆ,ಜಾಂಬವ ಯುವ ಸೇನೆ ಜಿಲ್ಲಾಧ್ಯಕ್ಷ ಹಣಮಂತ ಬಿಲ್ಲವ್, ಕಾಂಗ್ರೆಸ್ ಪಕ್ಷದ ಎಸ್ ಸಿ ಮೋರ್ಚಾ ತಾಲೂಕ ಅಧ್ಯಕ್ಷ ಮರೆಪ್ಪ, ಹಣಮಂತ ಕಟ್ಟಿಮನಿ, ದೇವೇಂದ್ರಪ್ಪ ಶಾಂತಗೇರಿ, ಪರಮಣ್ಣ ಕೋಳಿ, ಚಂದ್ರು ದಿವಳಗುಡ್ಡ, ಮಲ್ಲಪ್ಪ ಕೋಟೆ, ಹುಲಗಪ್ಪ ಶೆಳ್ಳಗಿ, ಬಸವರಾಜ ಮುಷ್ಠಹಳ್ಳಿ, ನಾಗರಾಜ ಓಕಳಿ, ಅಂಬ್ಲಪ್ಪ ಅರಳಹಳ್ಳಿ, ಮಲ್ಲಿಕಾರ್ಜುನ ಕಟ್ಟಿಮನಿ,ಕೃಷ್ಣ ಕಡಿಮನಿ, ಜಟ್ಟೆಪ್ಪ ಸತ್ಯಂಪೇಟ, ಭೀಮಣ್ಣ ದೀವಳ ಗುಡ್ಡ, ಸಾಹೇಬಣ್ಣ ದೇವರ ಗೋನಾಲ, ಪರಮಣ್ಣ ಹುಣಸಗಿ, ಭೀಮಾಶಂಕರ,ಮಲ್ಲು ಬಿಲ್ಲವ್,ನಾಗಪ್ಪ,ಆದಪ್ಪ ಅರಳಹಳ್ಳಿ, ನಿಂಗಪ್ಪ ದೇವರಗೋನಾಲ, ಸಿದ್ದಪ್ಪ ಮಾವಿನಮಟ್ಟಿ,ದೇವಪ್ಪ ಯಡಳ್ಳಿ,ನಿಂಗಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News