ದುಬೈ: ವಾರ್ತಾಭಾರತಿ ಪತ್ರಿಕೆಗೆ 24ನೇ ವರ್ಷದ ಶುಭಾಶಯಗಳು. ಸತ್ಯ, ನಿಷ್ಠೆ ಹಾಗೂ ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಂಡು ಜನರ ಧ್ವನಿಯಾಗಿ ಬೆಳೆದು ಬಂದಿರುವ ವಾರ್ತಾಭಾರತಿ ಪತ್ರಿಕೆ 24ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿ.

ವಿಶ್ವದಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರ ವಿಚಾರಗಳನ್ನು ಹಂಚಿಕೊಳ್ಳಲು, ಅವರ ಧ್ವನಿಗೆ ವೇದಿಕೆ ಕಲ್ಪಿಸಲು ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ಕನ್ನಡಿಗರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ವಾರ್ತಾ ಭಾರತಿ ಸಲ್ಲಿಸುತ್ತಿರುವ ಸೇವೆ ನಿಜಕ್ಕೂ ಶ್ಲಾಘನೀಯ.

ವಿಶ್ವದಾದ್ಯಂತ ಇರುವ ಎಲ್ಲಾ ಅನಿವಾಸಿ ಕನ್ನಡಿಗರಿಗೆ ನಿರಂತರ ಬೆಂಬಲ ನೀಡುತ್ತಾ, ಕನ್ನಡಿಗರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುತ್ತಿರುವ ವಾರ್ತಾ ಭಾರತಿ ಬಳಗಕ್ಕೆ ಧನ್ಯವಾದಗಳು.

ಕಳೆದ 23 ವರ್ಷಗಳಿಂದ ನಿಷ್ಪಕ್ಷಪಾತ ಮತ್ತು ಜನಪರ ಪತ್ರಿಕೋದ್ಯಮದ ಮೂಲಕ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿರುವ ಪತ್ರಿಕೆಯು ಮುಂದಿನ ದಿನಗಳಲ್ಲೂ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ. ಪತ್ರಿಕೆಯ ಸಂಪಾದಕೀಯ ಬಳಗ, ವರದಿಗಾರರು, ಸಿಬ್ಬಂದಿ ಹಾಗೂ ಓದುಗರಿಗೆ ಹೃತ್ಪೂರ್ವಕ ಶುಭಾಶಯಗಳು.

ವಾರ್ತಾ ಭಾರತಿ ಇನ್ನಷ್ಟು ವರ್ಷಗಳ ಕಾಲ ಸತ್ಯದ ಪರವಾಗಿ, ಜನರ ಪರವಾಗಿ ಧ್ವನಿಯಾಗಿರಲಿ ಎಂಬ ಹಾರೈಕೆಯೊಂದಿಗೆ 24ನೇ ವರ್ಷದ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.

-ಹಿದಾಯತ್ ಅಡ್ಡೂರು, ಅಧ್ಯಕ್ಷರು, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (BCCI) UAE

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor