ಕುಡುಪು ಗುಂಪು ಹತ್ಯೆ ಪ್ರಕರಣ: ಆರೋಪಿ ರವೀಂದ್ರ ನಾಯ್ಕ್ ನಿರೀಕ್ಷಣಾ ಜಾಮೀನಿಗೆ ಅರ್ಜಿ
Update: 2025-08-22 22:19 IST
ಮುಹಮ್ಮದ್ ಅಶ್ರಫ್
ಮಂಗಳೂರು, ಆ.22: ನಗರ ಹೊರವಲಯದ ಕುಡುಪು ಬಳಿ ಎ.27ರಂದು ನಡೆದ ಕೇರಳದ ವಯನಾಡಿನ ಮುಹಮ್ಮದ್ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ರವೀಂದ್ರ ನಾಯ್ಕ್ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿ ಮುಂದಿನ ವಿಚಾರಣೆಯು ಆ.28ರಂದು ನಡೆಯಲಿದೆ.
ಈಗಾಗಲೆ ಹತ್ಯೆಗೆ ಸಂಬಂಧಿಸಿದಂತೆ ಕುಡುಪು ಮತ್ತು ಸುತ್ತಮುತ್ತಲಿನ ಪರಿಸರದ ಸಚಿನ್ ಟಿ., ದೇವದಾಸ್ ಅಂಚನ್, ಮಂಜುನಾಥ್, ನಟೇಶ್ ಕುಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ವಿವಿಯನ್ ಆಲ್ವಾರೀಸ್, ಶ್ರೀದತ್ತ, ದನುಷ್, ಕಿಶೋರ್ ಕುಮಾರ್, ರಾಹುಲ್, ಪ್ರದೀಪ್ ಕುಮಾರ್, ಮನೀಷ್ ಶೆಟ್ಟಿ, ಸಾಯಿದೀಪ್, ಸಂದೀಪ್ ಬಸವರಾಜ್, ದೀಕ್ಷಿತ್ ಯಾನೆ ಮುನ್ನ, ಅನಿಲ್, ಯತಿರಾಜ್ ಯಾನೆ ಯತಿನ್, ಆದರ್ಶ್ ಪಂಡಿತ್, ಸಚಿನ್, ಕೆ. ಸುಶಾಂತ್, ಅನಿಲ್ ಕುಮಾರ್ ಸಹಿತ 21 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ 6 ಮಂದಿಗೆ ಜಾಮೀನು ಲಭಿಸಿದೆ.