×
Ad

ಸಮಸ್ತ ಸೆಂಟಿನರಿ ಅಂಗವಾಗಿ ದ.ಕ.ಜಿಲ್ಲಾ ಮುಅಲ್ಲಿಂ ಸಮ್ಮೇಳನ

Update: 2025-10-15 18:33 IST

ಮಂಗಳೂರು, ಅ.15: ಸಮಸ್ತ ಸೆಂಟಿನರಿ ಅಂಗವಾಗಿ ದ.ಕ. ಜಿಲ್ಲಾ ಮುಅಲ್ಲಿಂ ಸಮ್ಮೇಳನದ ಕರ್ನಾಟಕ ರಾಜ್ಯ ಮಟ್ಟದ ಉದ್ಘಾಟನಾ ಸಮಾರಂಭವು ದ.ಕ.ಜಿಲ್ಲಾ ಈಸ್ಟ್,ವೆಸ್ಟ್, ಸೌತ್ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಮಂಗಳವಾರ ನಡೆಯಿತು.

ಎಸ್.ಜೆ.ಎಂ. ಕರ್ನಾಟಕ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ‌್ರಹ್ಮಾನ್ ಮದನಿ ಅಧ್ಯಕ್ಷತೆ ವಹಿಸಿದರು. ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ತೆನ್ನಲ ಅಬೂಹನೀಫಲ್ ಫೈಝಿ ಸಭೆಯನ್ನು ಉದ್ಘಾಟಿಸಿದರು. ಅಮೀನುಶ್ಶರೀಅ ಸಯ್ಯಿದ್ ಅಲೀ ಬಾಫಖಿ ತಂಳ್ ದುಆಗೆ ನೇತೃತ್ವ ನೀಡಿದರು. ವಿ.ಪಿ.ಎಂ.ಫೈಝಿ ವಿಲ್ಯಾಪಳ್ಳಿ, ವಿದ್ಯಾಭ್ಯಾಸ ಬೋರ್ಡ್ ಕಾರ್ಯದರ್ಶಿ ಪ್ರೊ. ಎ.ಕೆ. ಅಬ್ದುಲ್ ಹಮೀದ್ ಸಾಹಿಬ್, ಸಿ.ಪಿ. ಸೈದಲವಿ ಮಾಸ್ಟರ್ ಚೆ್ಂಙರ, ಉಮರ್ ಮದನಿ ಪಾಲಕ್ಕಾಡ್, ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷ ಕೊಡುಂಗಾಯಿ ಅಬ್ದುಲ್ ಹಮೀದ್ ಹಾಜಿ ಮಾತನಾಡಿದರು.

ಈ ಸಂದರ್ಭ ಸಮಸ್ತ ಉಪಾಧ್ಯಕ್ಷ ಹಾಗೂ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಕೋಶಾಧಿಕಾರಿ ಖುದ್ವತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್. ಆಟಕೋಯ ತಂಳ್ ಕುಂಬೋಳ್, ಕರ್ನಾಟಕ ಜಂಇಯ್ಯತುಲ್ ಉಲಮಾ ಅಧ್ಯಕ್ಷ, ಉಡುಪಿ, ಚಿಕ್ಕಮಗಳೂರು ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್, ಜಿ.ಎಂ.ಅಬೂಬಕರ್ ಸುನ್ನಿ ಫೈಝಿ ಪೆರುವಾಯಿ, ಅಬ್ದುರ‌್ರಹ್ಮಾನ್ ಮುಸ್ಲಿಯಾರ್ ಮೊಗ್ರಾಲ್ ಅವರನ್ನು ಗೌರವಿಸಲಾಯಿತು.

ಸುನ್ನೀ ಮದ್ರಸ ಶಿಕ್ಷಣ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿದ ಮದ್ರಸ ಅಧ್ಯಾಪಕರನ್ನು ಮತ್ತು ಎಸ್‌ಜೆಎಂ ಸಂಘಟನೆಗಾಗಿ ನಿಸ್ವಾರ್ಥ ಸೇವೆಗೈದ ಕೆಲವು ನಾಯಕರನ್ನು ಮುಅಲ್ಲಿಂ ಅವಾರ್ಡ್ ನೀಡಿ ಗೌರವಿಸಲಾಯಿತು.

ಸಮಸ್ತದ ಆದರ್ಶ ಎಂಬ ವಿಷಯದಲ್ಲಿ ತೋಕೆ ಮುಹಿಯುದ್ದೀನ್ ಕಾಮಿಲ್ ಸಖಾಫಿ, ಅಧ್ಯಾಪನ ಸೇವೆಯಾಗಿದೆ ಎಂಬ ವಿಷಯದಲ್ಲಿ ಕುಂಞಿಕುಳಂ ಸುಲೈಮಾನ್ ಸಖಾಫಿ, ಸಮಸ್ತ ತಂದ ವಿದ್ಯಾಭ್ಯಾಸ ಕ್ರಾಂತಿ ಎಂಬ ವಿಷಯದಲ್ಲಿ ಅಬ್ದುರ‌್ರಶೀದ್ ಸಖಾಫಿ ಪತ್ತಪಿರಿಯಂ ತರಗತಿ ನಡೆಸಿದರು.

ರಾಜ್ಯ ಎಸ್‌ಎಂಎ ಕೋಶಾಧಿಕಾರಿ ಮುಹಮ್ಮದ್ ಮನ್ಸೂರ್ ಕುಂದಾಪುರ ಕೋಡಿ, ಎಸ್‌ಎಂಎ ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಬಶೀರ್ ಅಹ್ಮದ್ ಪಂಜಿಮೊಗರು, ಎಸ್‌ಎಂಎ ದ.ಕ. ಈಸ್ಟ್ ಜಿಲ್ಲಾಧ್ಯಕ್ಷ ಅಬ್ಬಾಸ್ ಬಟ್ಲಡ್ಕ, ಎಸ್‌ಜೆಎಂ ರಾಜ್ಯ ಕೋಶಾಧಿಕಾರಿ ಎಂ.ಕೆ. ಅಬ್ದುಲ್ ರಶೀದ್ ಸಖಾಫಿ ಮಜೂರು, ರಾಜ್ಯ ಉಪಾಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ, ಪುಂಡೂರು ಇಬ್ರಾಹಿಂ ಸಖಾಫಿ, ರಾಜ್ಯ ನಾಯಕರಾದ ಒ.ಕೆ. ಸಈದ್ ಮುಸ್ಲಿಯಾರ್, ಸಮ್ಮೇಳನ ನಿರ್ವಹಣಾ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಸಅದಿ ಬೇಂಗಿಲ, ಎ.ಎಂ.ಇಸ್ಮಾಯಿಲ್ ಸಅದಿ ಉರುಮಣೆ, ತೋಟಾಲ್ ಮುಹಿಯದ್ದೀನ್ ಸಅದಿ, ಮುಫತ್ತಿಸ್ ಹಾಫಿಲ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ಪಿ.ಎಂ. ಇಬ್ರಾಹೀಂ ನಈಮಿ, ಅಬ್ದುಲ್ ಅಝೀಝ್ ನೂರಾನಿ, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಎಸ್‌ವೈಎಸ್ ರಾಜ್ಯಾಧ್ಯಕ್ಷ ಪೀಣ್ಯ ಬಶೀರ್ ಸಅದಿ, ಅಡ್ಯಾರ್ ಪದವು ಇಸ್ಮಾಯಿಲ್, ಎಸ್.ಎಂ.ಎ.ದ.ಕ.ಈಸ್ಟ್ ಜಿಲ್ಲಾ ಕೋಶಾಧಿಕಾರಿ ಲತೀಫ್ ಅರ್ಲಡ್ಕ, ಇಬ್ರಾಹಿಂ ಖಲೀಲ್ ಮಾಲಿಕಿ, ಎಸ್.ವೈ.ಎಸ್. ದ.ಕ. ವೆಸ್ಟ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ, ಅಬ್ದುರ‌್ರಹ್ಮಾನ್ ಸಖಾಫಿ ಚಿಪ್ಪಾರ್, ಅಬ್ದುಲ್ಲಾ ಸಖಾಫಿ ಕೊಡಗು, ಅಬ್ಬಾಸ್ ನಿಝಾಮಿ ಬೆಂಗಳೂರು, ಹನೀಫ್ ಕಾಮಿಲ್ ಸಖಾಫಿ ಹಾಸನ, ಸೈಫುಲ್ಲಾ ಸಖಾಫಿ ಶಿವಮೊಗ್ಗ, ತಾಜುದ್ದೀನ್ ಫಾಲಿಲಿ, ಅಬ್ದುರ‌್ರಝ್ಝಾಕ್ ಖಾಸಿಮಿ ಉಡುಪಿ, ಸಿರಾಜುದ್ದೀನ್ ಸಖಾಫಿ ಪೀಚಲಾರ್, ಇಬ್ರಾಹಿಂ ಸಖಾಫಿ ಕಬಕ, ಇಬ್ರಾಹಿಂ ಸಖಾಫಿ ಸೆರ್ಕಳ, ಅಶ್ರಫ್ ಇಂದಾದಿ, ನವಾಝ್ ಸಖಾಫಿ ಉಳ್ಳಾಲ, ಯೂನುಸ್ ಇಮ್ದಾದಿ ಉಪಸ್ಥಿತರಿದ್ದರು.

ಎಸ್.ಜೆ.ಎಂ.ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ಮುಹಮ್ಮದ್ ಮದನಿ ಸ್ವಾಗತಿಸಿದರು. ಸಮ್ಮೇಳನ ನಿರ್ವಹಣಾ ಸಮಿತಿ ಕನ್ವೀನರ್ ಯಾಖೂಬ್ ಲತೀಫಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News