×
Ad

ಅಂತಾರಾಷ್ಟ್ರೀಯ ಸಮ್ಮೇಳನ "ಐಕಾನ್ ಯೂತ್ 2025" ಸಮಾರೋಪ ಸಮಾರಂಭ

Update: 2025-05-16 20:28 IST

ಮಂಗಳೂರು: ಅಂತಾರಾಷ್ಟ್ರೀಯ ಸಮ್ಮೇಳನದ ಪ್ರಯೋಜನ ಯುವಜನತೆಗೆ ಆಗಲಿ, ಜಾಗತಿಕ ಮಟ್ಟದಲ್ಲಿ ವ್ಯಕ್ತಿತ್ವ ವಿಕಾಸವಾಗಲಿ ಎಂದು  ಐಎಎಸ್  ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಣದೀಪ್ ಅವರು ಹೇಳಿದರು.

ಯುವಜನ ಮತ್ತು ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯ ಇದರ ಸಹಯೋಗದಲ್ಲಿ ಮೇ 15 ರಂದು ಯೆಂಡೂರನ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ಐಕಾನ್ ಯೂತ್ 2025 ಇದರ ಸಮಾರೋಪದಲ್ಲಿ ಅವರು ಮಾತನಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತರಾದ ಚೇತನ್ ಆರ್  ಅವರು ಯುವ ಪೀಳಿಗೆಯ ಏಳಿಗೆಗೆ ಇದೊಂದು ಉತ್ತಮ ಸಮ್ಮೇಳನ ಎಂದರು. ಉಪ ಕುಲಪತಿ ಡಾ. ವಿಜಯಕುಮಾರ್ ಸಭಾ ಅಧ್ಯಕ್ಷತೆ ವಹಿಸಿ ಸಂಘಟಕರ ಹಾಗೂ ಆಗಮಿಸಿದ ಸರ್ವರ ಕಾರ್ಯದಕ್ಷತೆಯಿಂದ ಈ ಸಮ್ಮೇಳನ ಪರಿಪೂರ್ಣ ಯಶಸ್ಸನ್ನು ಕಂಡಿದೆ ಎಂದು ಅಭಿನಂದನೆ ಸಲ್ಲಿಸಿದರು.

ಮಾಧೀಶ್ ಪರಿಖ್, ಸಂಸ್ಥಾಪಕ ಹಾಗೂ ನಿರ್ದೇಶಕರು ಬ್ರಿಕ್ಸ್ ಮೈತ್ರಿಕೂಟ, ಡಾ. ಬಿ. ಟಿ. ನಂದೀಶ್ , ಪರೀಕ್ಷಾ ನಿಯಂತ್ರಕರು ಯೆನೆಪೋಯ ವಿಶ್ವವಿದ್ಯಾಲಯ, ಕಾರ್ತಿಗೇಯನ್, ಪ್ರಾದೇಶಿಕ ನಿರ್ದೇಶಕರು, ಎನ್ಎಸ್ಎಸ್ ಮತ್ತು ಡಾ. ಪ್ರತಾಪ್ ಲಿಂಗಯ್ಯ, ರಾಜ್ಯ ಎನ್ಎಸ್ಎಸ್ ಅಧಿಕಾರಿ ಉಪಸ್ಥಿತರಿದ್ದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಅಶ್ವಿನಿ ಡಿ. ಶೆಟ್ಟಿ ಅವರು ಸ್ವಾಗತಿಸಿ, ವರದಿ ಮಂಡಿಸಿದರು. ಡಾ. ದಿವ್ಯರಾಣಿ ವಂದನಾರ್ಪಣೆ ಮಾಡಿದರು. ಅಧಿಕಾರಿ, ಪ್ರಿಯ ಮತ್ತು ಆದಿತ್ಯ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

ಈ ಸಮ್ಮೇಳನದಲ್ಲಿ ಭಾರತ ಮತ್ತು 5 ದೇಶಗಳ 650ಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಸಂಘಟನಾ ಕಾರ್ಯದರ್ಶಿ ಡಾ. ಅಶ್ವಿನಿ ಡಿ ಶೆಟ್ಟಿ ತಿಳಿಸಿದ್ದಾರೆ.
















 


 


 


 


 


 


 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News