ಫೆ.9ರಿಂದ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಸಮಾರಂಭ
ಸುಳ್ಯ: ಇತಿಹಾಸ ಪ್ರಸಿದ್ಧ ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ವಲಿಯುಲ್ಲಾಹಿ ದರ್ಗಾಶರೀಫ್ನಲ್ಲಿ ಉರೂಸ್ ಸಮಾ ರಂಭ ಫೆ.9 ರಿಂದ 11ರ ತನಕ ನಡೆಯಲಿದೆ. ಮೂರು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ ಎಂದು ಎಂ.ಜೆ.ಎಂ ಪೇರಡ್ಕ ಅಧ್ಯಕ್ಷರಾದ ಟಿ.ಎಂ.ಶಹೀದ್ ತೆಕ್ಕಿಲ್ ತಿಳಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪೇರಡ್ಕ ದರ್ಗಾ ಶರೀಫ್ ಜಾತಿಮತ ಬೇಧವಿಲ್ಲದೆ ಸರ್ವ ರಿಂದಲೂ ಗೌರವಿಸಲ್ಪಡುವ ಆಶಾಕೇಂದ್ರವಾಗಿದೆ.3 ದಿನಗಳ ಉರೂಸ್ ಸಮಾರಂಭ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಫೆ.9ರಂದು ಜುಮಾ ನಮಾಜಿನ ಬಳಿಕ ಎಂ.ಜೆ.ಎಂ.ಅಧ್ಯಕ್ಷ ಟಿ.ಎಂ.ಶಹೀದ್ ಧ್ವಜಾರೋಹಣ ನೆರವೇರಿಸುವರು. ಖತೀಬರಾದ ರಿಯಾಝ್ ಫೈಜಿ ಪ್ರಾರ್ಥನೆ ನೆರವೇರಿಸುವರು. ಅಪರಾಹ್ನ 2ಕ್ಕೆ ಮಖಾಂ ಅಲಂಕಾರ ಮತ್ತು ಕೂಟು ಪ್ರಾರ್ಥನೆ ನಡೆಯಲಿದೆ. ರಾತ್ರಿ 8ರಿಂದ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಸೈಯ್ಯದ್ ಝೈನುಲ್ ಅಬಿದೀನ್ ಜಿಪ್ರಿ ತಂಙಳ್ ಬೆಳ್ತಂಗಡಿ ಅವರು ಉದ್ಘಾಟನೆ ಮತ್ತು ಖುತ್ಮುಲ್ ಖುರ್ಆನ್ ದುಃವಾ ನೇತೃತ್ವ ವಹಿಸಲಿದ್ದಾರೆ. ಸಿರಾಜುದ್ದೀನ್ ದಾರಿಮಿ ಕಕ್ಕಾಡ್ ಕೇರಳ ಮುಖ್ಯ ಪ್ರಭಾಷಣ ಮಾಡುವರು.ಎಂ.ಜೆ.ಎಂ.ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು.
ಫೆ.10ರಂದು ರಾತ್ರಿ 8 ರಿಂದ ನಡೆಯುವ ಸಮಾರಂಭವನ್ನು ಅರಂತೋಡು ಬಿ.ಜೆ.ಎಂ ಖತೀಬರಾದ ಇಸಾಖ್ ಬಾಖವಿ ಉದ್ಘಾಟಿಸುವರು.ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮುಖ್ಯ ಪ್ರಭಾಷಣ ಮಾಡುವರು.ಎಂ.ಜೆ.ಎಂ.ಪೇರಡ್ಕ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹಿಂ ಮೈಲಿಕಲ್ಲು ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಹಾಗೂ ಸಾಮಾಜಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಫೆ.11ರಂದು ಸಂಜೆ 7 ರಿಂದ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ಅಝೀಝ್ ದಾರಿಮಿ ಚೊಕ್ಕಬೆಟ್ಟು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ರಾಜಕೀಯ, ಸಾಮಾಜಿಕ ಮುಖಂಡರು, ಎಲ್ಲಾ ಧರ್ಮಗಳ ಪ್ರಮುಖರು ಭಾಗವಹಿಸಲಿದ್ದಾರೆ. ರಾತ್ರಿ 9ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಎಂ.ಜೆ.ಎಂ.ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್ ಅಧ್ಯಕ್ಷತೆ ವಹಿಸುವರು. ಎಂಆರ್ಡಿಎ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಸ್ವಾಗತಿಸಲಿದ್ದಾರೆ. ಸಯ್ಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುಃವಾ ನೇತೃತ್ವ ವಹಿಸಲಿದ್ದಾರೆ. ರಿಯಾಝ್ ಪೈಝಿ ಎಮ್ಮೆಮಾಡು ಧಾರ್ಮಿಕ ಪ್ರಭಾಷಣ ಮಾಡಲಿದ್ದಾರೆ. ಪ್ರಮುಖರಾದ ಇಸ್ಮಾಯಿಲ್ ನಾಪೊಕ್ಲು, ಡಾ.ಉಮ್ಮರ್ ಬೀಜದಕಟ್ಟೆ, ನ.ಪಂ.ಸದಸ್ಯ ಕೆ.ಎಸ್.ಉಮ್ಮರ್, ಸಂಪಾಜೆ ಗ್ರಾ.ಪಂ. ಉಪಾಧ್ಯಕ್ಷ ಎಸ್.ಕೆ.ಹನೀಫ, ಅಬ್ದುಲ್ ರಹಿಮಾನ್ ಸಂಕೇಶ ಮತ್ತಿತರರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಎಂ.ಜೆ.ಎಂ. ಪೇರಡ್ಕ ಪ್ರಧಾನ ಕಾರ್ಯದರ್ಶಿ ಪಿ.ಕೆ.ಉಮ್ಮರ್, ಉಪಾಧ್ಯಕ್ಷ ಹನೀಫ್.ಟಿ.ಬಿ, ಎಂ.ಆರ್.ಡಿ.ಎ ಅಧ್ಯಕ್ಷ ಜಿ.ಕೆ.ಹಮೀದ್, ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಎಸ್ಕೆಎಸ್ಎಸ್ಎಫ್ ಗೂನಡ್ಕ ಶಾಖೆ ಅಧ್ಯಕ್ಷ ಮುನೀರ್ ದಾರಿಮಿ ಉಪಸ್ಥಿತರಿದ್ದರು.