×
Ad

ಗಾಂಜಾ ಸೇವನೆ ಆರೋಪ: ಇಬ್ಬರ ಸೆರೆ

Update: 2023-11-27 23:04 IST

ಮಂಗಳೂರು : ನಗರದ ಸುಲ್ತಾನ್ ಬತ್ತೇರಿ ಬಳಿ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಕೊಟ್ಟಾಯಂನ ಕಲ್ಲಿಕೋಟೆ ಹೌಸ್ ನಿವಾಸಿ ಹರಿಕೃಷ್ಣನ್ (28) ಮತ್ತು ಎರ್ನಾಕುಲಂ ಮಾರ್ಕೆಟ್ ರೋಡ್ ತೆರಟ್ಟಿಲ್ ಹೌಸ್ ನಿವಾಸಿ ಇಮ್ಯಾನುಯೆಲ್ (23) ಬಂಧಿತ ಆರೋಪಿಗಳು.

ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಇವರ ವಿರುದ್ಧ ಮಾದಕ ದ್ರವ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News