×
Ad

ಗಾಂಜಾ ಸೇವನೆ ಆರೋಪ: ಯುವಕನ ಸೆರೆ

Update: 2023-11-02 21:39 IST

ಮಂಗಳೂರು: ನಗರದ ಉರ್ವ ಮೈದಾನದ ಬಳಿ ಗಾಂಜಾ ಸೇವನೆಯ ಆರೋಪದ ಮೇರೆಗೆ ಉರ್ವಸ್ಟೋರ್ ಚರ್ಚ್‌ಗುಡ್ಡೆಯ ರೋಶನ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಯು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದುದನ್ನು ಕಂಡು ಸಂಶಯಗೊಂಡ ಪೊಲೀಸರು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ.

ಸೈಬರ್ ಆರ್ಥಿಕ ಮತ್ತು ಮಾದಕದ್ರವ್ಯ ಅಪರಾಧ ಪೊಲೀಸ್ ಠಾಣೆಯ ಎಸ್ಸೈ ಶೋಭಾ ಗುರುವಾರ ಬೆಳಗ್ಗೆ ಗಸ್ತು ನಿರತರಾಗಿದ್ದ ವೇಳೆ ಈ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News