×
Ad

ಕಾಣೆಯಾದ ವ್ಯಕ್ತಿಯ ಪತ್ತೆಗೆ ಮನವಿ

Update: 2025-11-10 18:57 IST

ಮಂಗಳೂರು, ನ.10: ನಗರದ ನಾಗುರಿ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಅಂಕೋಲದ ನಿವಾಸಿ ರಾಮಮೂರ್ತಿ ರಮಾನಂದ ನಾಯಕ್ (38) ಎಂಬವರು 2022ರ ಸೆ.25ರಿಂದ ಕಾಣೆಯಾಗಿದ್ದಾರೆ.

ಪಂಪ್ವೆಲ್ ನ ಎಂಬೆಸಿ ಫ್ಲಾಝಾದಲ್ಲಿರುವ ಎಸ್.ಕೆ. ಗ್ರೂಪ್ ಮಾರ್ಕೆಟಿಂಗ್ ಸಂಸ್ಥೆಯಲ್ಲಿ ಸೇಲ್ಸ್ ಎಗ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ರಮಾನಂದ ನಾಯಕ್ ಕೆಲಸಕ್ಕೆಂದು ಹೊರ ಹೋದವರು ಮರಳಿ ಬಂದಿಲ್ಲ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

6 ಅಡಿ ಎತ್ತರದ, ಬಿಳಿ ಮೈ ಬಣ್ಣದ, ಸಾಧಾರಣ ಶರೀರದ, ದುಂಡು ಮುಖದ ರಮಾನಂದ ನಾಯಕ್ ಕಾಣೆಯಾದ ದಿನ ನೀಲಿ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ತಿಳಿದಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News