×
Ad

ಕ್ಷುಲ್ಲಕ ವಿಚಾರಕ್ಕೆ ವ್ಯಕ್ತಿಗೆ ಹಲ್ಲೆ: ಪ್ರಕರಣ ದಾಖಲು

Update: 2024-11-04 23:17 IST

ಉಳ್ಳಾಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನಿಗೆ ಹಲ್ಲೆ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸೋಮೇಶ್ವರ ದಲ್ಲಿ ನಡೆದಿದೆ.

ಹಲ್ಲೆ ಗೊಳಗಾದ ವ್ಯಕ್ತಿಯನ್ನು ಕಿಶೋರ್ ಎಂ.ಉಚ್ಚಿಲ (52)ಎಂದು ಗುರುತಿಸಲಾಗಿದೆ.

‌ಸುನಿಲ್ ಪೂಜಾರಿ ಯಾನೆ ಜುಟ್ಟು ಹಲ್ಲೆಗೈದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. 

ಕಿಶೋರ್ ಅವರು ತನ್ನ ಸ್ನೇಹಿತನ ಜೊತೆ ಸೋಮೇಶ್ವರ ದಲ್ಲಿರುವ ಹೊಟೇಲ್ ನಲ್ಲಿ ಚಾ ಕುಡಿದು ಸ್ಕೂಟರ್ ನಲ್ಲಿ ಸೋಮೇಶ್ವರ ಪಂಚಾಯತ್ ರಸ್ತೆ ಯಾಗಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಹೇಳೇ ದ್ವೇಷವೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

ಈ ಬಗ್ಗೆ ಕಿಶೋರ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News