×
Ad

ಕಿನ್ನಿಗೋಳಿ: ಖಿಲ್‌ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಟಿ.ಎ. ಹನೀಫ್ ಆಯ್ಕೆ

Update: 2024-12-24 13:51 IST

ಕಿನ್ನಿಗೋಳಿ: ಖಿಲ್‌ರಿಯಾ ಜುಮಾ ಮಸೀದಿ ಶಾಂತಿನಗರ ಗುತ್ತಕಾಡು ಇದರ 2025ನೇ ಸಾಲಿನ ಆಡಳಿತ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಭಾನುವಾರ ನಡೆದ ಜಮಾಅತ್‌ ಮಹಾಸಭೆಯಲ್ಲಿ ನಡೆಯಿತು.

ಹಾಜಿ ಟಿ.ಹೆಚ್.‌ ಮಯ್ಯದ್ದಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ನೂತನ ಆಡಳಿತ ಸಮಿತಿಗೆ ಟಿ.ಎ. ಹನೀಫ್‌ ಅವಿರೋಧವಾಗಿ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ನವಾಝ್‌ ಕಲ್ಕರೆ, ಕಾರ್ಯದರ್ಶಿಯಾಗಿ ಇಕ್ಬಾಲ್ ಗುತ್ತಕಾಡು,‌ ಜೊತೆ ಕಾರ್ಯದರ್ಶಿಯಾಗಿ ಆರಿಫ್‌ ಗುತ್ತಕಾಡು, ಖಜಾಂಚಿಯಾಗಿ ನಾಸೀರ್‌, ಲೆಕ್ಕ ಪರಿಶೋಧಕರಾಗಿ ಜೆ.ಹೆಚ್.‌ ಜಲೀಲ್‌ ಇವರನ್ನು ಆಯ್ಕೆ ಮಾಡಲಾಯಿತು.

ನೂತನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಟಿ.ಹೆಚ್. ಮಯ್ಯದ್ದಿ,‌ ಹಾಜಿ ಅಬ್ದುಲ್ ರಹಿಮಾನ್, ಅಸ್ಕರ್ ಅಲಿ, ಟಿ.ಕೆ. ಅಬ್ದುಲ್‌ ಖಾದರ್, ಶೇಖಬ್ಬ, ಅಬ್ದುಲ್‌ ರಝಾಕ್‌ ಇ., ಕೆ.ಯು. ಹಸನಬ್ಬ, ಗುಲಾಂ ಹುಸೇನ್‌, ವಿ. ಅಬೂಬಕ್ಕರ್, ಟಿ. ಮುಹಮ್ಮದ್‌, ನೂರುದ್ದೀನ್‌, ಇ. ಖಾದರ್‌, ಖಾದರ್‌ ಎಂ., ಟಿ.ಎಂ.ಎ. ಮನ್ಸೂರ್‌, ಶಫೀಕ್‌, ಶಮೀಮ್‌ ಅಲಿ ಹಾಗೂ ನೌಫಲ್‌ ಕಲ್ಕರೆ ಅವರು ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News