×
Ad

ಮಂಗಳೂರು| ಪ್ರವಾದಿ ಮುಹಮ್ಮದರ ಸಂದೇಶಗಳು ಸಾರ್ವಕಾಲಿಕವಾಗಿದೆ: ಪೇರೋಡ್ ಉಸ್ತಾದ್

Update: 2025-09-01 23:29 IST

ಮಂಗಳೂರು, ಸೆ.1: ಪ್ರವಾದಿ ಮುಹಮ್ಮದ್ (ಸ) ಸಂದೇಶಗಳು ಕೇವಲ ಒಂದು ಪ್ರದೇಶಕ್ಕೋ ಒಂದು ಕಾಲಕ್ಕೋ ಒಂದು ಸಮುದಾಯಕ್ಕೋ ಸೀಮಿತವಾಗದೆ ಸರ್ವರಿಗೂ ಉಪಯುಕ್ತವಾಗುವ ಸಾರ್ವಕಾಲಿಕ ಪ್ರಾಯೋಗಿಕ ಸಿದ್ಧಾಂತಗಳಾಗಿವೆ ಎಂದು ಸಮಸ್ತ ಉಲಮಾ ಒಕ್ಕೂಟದ ಕಾರ್ಯದರ್ಶಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಹೇಳಿದ್ದಾರೆ.

ಲೋಕಾನುಗ್ರಹಿ ಪ್ರವಾದಿ ಮುಹಮ್ಮದ್(ಸ.)ರ 1500ನೇ ಜನ್ಮ ದಿನ ಸಂಭ್ರಮಾಚರಣೆ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ದ.ಕ. ಜಿಲ್ಲಾ ವೆಸ್ಟ್ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಂಗಳೂರಿನ ಪುರಭವನದಲ್ಲಿ ನಡೆದ ಹುಬ್ಬುರ‌್ರಸೂಲ್ ಕಾನ್ಫರೆನ್ಸ್‌ನಲ್ಲಿ ‘ಸಾರ್ವತ್ರಿಕ ದರ್ಶನದ ಪ್ರವಾದಿ’ ಎಂಬ ವಿಷಯದಲ್ಲಿ ಮುಖ್ಯ ಭಾಷಣ ಮಾಡಿದರು.

ಅನಾಗರಿಕತೆ, ಅಂಧಾಚಾರ, ಅನಾಚಾರಗಳು ವ್ಯಾಪಕವಾಗಿದ್ದ ಕಾಲದಲ್ಲಿ ಆಗಮಿಸಿದ ಪ್ರವಾದಿ ಮುಹಮ್ಮದರು ಇಡೀ ಜಗತ್ತಿನ ಸುಧಾರಣೆಗೆ ಅಗತ್ಯವಾದ ಸಂದೇಶಗಳನ್ನು ನೀಡಿದರುಮುಸ್ಲಿಂನಿಂದ ಯಾವತ್ತೂ ಯಾರಿಗೂ ಯಾವುದೇ ದೈಹಿಕ ಅಥವಾ ಮಾನಸಿಕ ಕಿರುಕುಳ ಉಂಟಾಗಬಾರದು ಎಂಬುದಾಗಿ ಎಚ್ಚರಿಸಿದ್ದಾರೆ ಎಂದು ಅವರು ವಿವರಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಶೇಖ್ ಬಾವ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಎಸ್‌ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ ಉದ್ಘಾಟಿಸಿದರು.

ಅಬ್ದುಲ್ ರಶೀದ್ ಝೈನಿ ಕಾಮಿಲ್, ದಕ್ಷಿಣ ಕನ್ನಡ ಜಿಲ್ಲಾ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್,ಎಸ್‌ವೈಎಸ್ ಜಿಲ್ಲಾಧ್ಯಕ್ಷ ಮಹ್ಬೂಬ್ ಸಖಾಫಿ ಕಿನ್ಯ ಮಾತನಾಡಿದರು.

ಜಿ.ಎಂ ಕಾಮಿಲ್ ಸಖಾಫಿ , ಉಸ್ಮಾನ್ ಸಅದಿ ಪಟ್ಟೋರಿ, ಮುಹಮ್ಮದ್ ಹಾಜಿ ಸಾಗರ , ಉಳ್ಳಾಲ ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಉಳ್ಳಾಲ , ಮನಪಾ ಮಾಜಿ ಸದಸ್ಯ ಲತೀಫ್ ಖಂದಕ್ , ಎಎ ಹೈದರ್ ಪರ್ತಿಪಾಡಿ, ಶಕೀರ್ ಹಾಜಿ ಹೈಸಂ, ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ , ಇಬ್ರಾಹಿಂ ಖಲೀಲ್ ಮಾಲಿಕಿ, ಕಾರ್ಯದರ್ಶಿ ಸಿಎಚ್ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯ, ಆಸಿಫ್ ಹಾಜಿ ಕೃಷ್ಣಾಪುರ , ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ರವೂಫ್ ಹಿಮಮಿ ಹಳೆಯಂಗಡಿ, ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಎಂಎಸ್ಸಿ ಬಜ್ಪೆ, ಇಸ್ಹಾಕ್ ಝುಹ್ರಿ ಕಾನಕೆರೆ, ಕೆಸಿಎಫ್ ಯುಕೆ ನಾಯಕ ಇಂಜಿನಿಯರ್ ಹನೀಫ್ ಪೇರಿಮಾರ್ , ಆಶ್ರಫ್ ಸಅದಿ ಮಲ್ಲೂರು , ಆಶ್ರಫ್ ಕಿನಾರ , ಕೆಕೆಎಂ ಕಾಮಿಲ್ ಸುರಿಬೈಲ್ , ಅಬ್ದುಲ್ ರಝಾಕ್ ಹಾಜಿ ನಾಟೆಕಲ್, ಅಬ್ದುಲ್ ಖಾದರ್ ಸಖಾಫಿ ಅಲ್ ಮದೀನಾ, ಬಶೀರ್ ಮದನಿ ಕೂಳೂರು , ಬದ್ರುದ್ದೀನ್ ಅಝ್ಹರಿ ಕೈಕಂಬ, ಜಿಲ್ಲಾ ಕೋಶಾಧಿಕಾರಿ ರಝಾಕ್ ಭಾರತ್ , ಫಾರೂಕ್ ಶೇಡಿಗುರಿ ಮುಂತಾದವರು ಉಪಸ್ಥಿತರಿದ್ದರು.

ಸ್ವಾಗತ ಸಮಿತಿ ಜನರಲ್ ಕನ್ವೀನರ್ ಯಾಕೂಬ್ ಸಅದಿ ನಾವೂರು ಸ್ವಾಗತಿದರು.ಜಿಲ್ಲಾ ಉಪಾಧ್ಯಕ್ಷ ತೌಸಿಫ್ ಸದಿ ಹರೇಕಳ ಕಾರ್ಯಕ್ರಮ ನಿರೂಪಿಸಿದರು . ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ವಂದಿಸಿದರು.

ಗ್ರ್ಯಾಂಡ್ ಮೌಲಿದ್ ಮಜ್ಲಿಸ್ : ಇದೇ ಸಂದರ್ಭದಲ್ಲಿ ನಡೆದ ಗ್ರ್ಯಾಂಡ್ ಮೌಲಿದ್ ಮಜ್ಲಿಸ್‌ನ್ನು ಉದ್ಘಾಟಿಸಿ ಮಾತನಾ ಡಿದ ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯ್ಯಾಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್ ಅವರು ಪ್ರವಾದಿ ಮುಹಮ್ಮದ್(ಅ) ಅವರಿಗೆ ಅಲ್ಲಾಹನು ಅತ್ಯನ್ನತ ಪದವಿಯನ್ನು ನೀಡಿದ್ದಾನೆೆ. ಅವರ ವ್ಯಕ್ತಿತ್ವ ,ಸ್ವಭಾವ ಕುರ್‌ಆನ್ ಆಗಿದೆ ಎಂದು ಹೇಳಿದರು.

ಕುರ್‌ಆನ್‌ನ ಆಯತ್‌ಗಳಿಗೆ ಧಾರಾಳ ಅರ್ಥಗಳಿವೆ , ವ್ಯಾಖ್ಯಾನಗಳಿಗೆ ಹೇಗೆ ಕೊನೆ ಇಲ್ಲವೋ ಹಾಗೆಯೇ ಪ್ರವಾದಿ ಯವರ ವ್ಯಕ್ತಿತ್ವ ಸ್ವಭಾವ ಅವರ್ಣನೀಯ , ಪ್ರವಾದಿಯವರ ಸ್ವಭಾವವನ್ನು ಬಣ್ಣಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಆರಿಫ್ ಸಅದಿ ಭಟ್ಕಳ ಗ್ರ್ಯಾಂಡ್ ಮೌಲಿದ್ ಮಜ್ಲಿಸ್‌ನ ನೇತೃತ್ವ ವಹಿಸಿದ್ದರು.

*ಇಲಲ್ ಹಬೀಬ್’ ಮೀಲಾದ್ ರ್ಯಾಲಿ: ಇದಕ್ಕೂ ಮೊದಲು ಜ್ಯೋತಿ ವೃತ್ತದಿಂದ ಪುರಭವನ ತನಕ ‘ಇಲಲ್ ಹಬೀಬ್’ ಮೀಲಾದ್ ರ್ಯಾಲಿ ನಡೆಯಿತು.

ರ್ಯಾಲಿಯಲ್ಲಿ ಸಂದೇಶ ನೀಡಿದ ಹುಸೈನ್ ಮುಈನಿ ಮಾರ್ನಾಡ್ ಸಂದೇಶ ನೀಡಿ ಜಗತ್ತಿನ ಇತಿಹಾಸದಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರಂತಹ ಪ್ರಾಮಾಣಿಕ, ಪ್ರಬುದ್ಧ , ಸತ್ಯವಂತ ಇನ್ನೊಬ್ಬರು ಇಲ್ಲ ಎಂದರು.

ಅತ್ಯಂತ ಸೌಮ್ಯ ಸ್ವಭಾವದರಾಗಿದ್ದ ಪ್ರವಾದಿಯವರು ಪರಿಶುದ್ಧ ಕುರ್ ಆನ್‌ನ ಅತ್ಯಂತ ಸುಂದರವಾದ ಸಂದೇಶವನ್ನು ಜಗತ್ತಿಗೆ ಕಲಿಸಿಕೊಟ್ಟರು ದೇಶಭಕ್ತಿ, ತಾಯ್ನೆಲದ ಮೇಲಿನ ಪ್ರೀತಿಯನ್ನು, ಸುಂದರ ಬದುಕಿನ ವಿಧಾನವನ್ನು , ಶಾಂತಿ, ಸೌಹಾರ್ದತೆಯ , ಸಾಮರಸ್ಯದ, ಮಾನವೀಯತೆಯ ಅತೀ ದೊಡ್ಡ ಪಾಠವನ್ನು ಕಲಿಸಿಕೊಟ್ಟರು ಎಂದು ಹೇಳಿದರು.

ಮೀಲಾದ್ ಸಮಿತಿಯ ಚೇರ್‌ಮ್ಯಾನ್ ಬಶೀರ್ ಹಾಜಿ ಬಿ.ಸಿ.ರೋಡು ಅಧ್ಯಕ್ಷತೆ ವಹಿಸಿದ್ದರು.ಹುಬ್ಬುರ‌್ರಸೂಲ್ ಕಾನ್ಫೆರೆನ್ಸ್ ನಿರ್ವಹಣಾ ಸಮಿತಿ ಜನರಲ್ ಕನ್ವೀನರ್ ಹಾಫಿಳ್ ಯಾಕೂಬ್ ಸಅದಿ ನಾವೂರು,ಮಹ್ಬೂಬ್ ಸಖಾಫಿ ಕಿನ್ಯ , ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ , ಜಿ.ಎಂ ಮುಹಮ್ಮದ್ ಕಾಮಿಲ್ ಸಖಾಫಿ, ಬಶೀರ್ ಅಹ್ಮದ್ ಪಂಜಿಮೊಗರು, ಹನೀಫ್ ಹಾಜಿ ಬಜ್ಪೆ , ಹನೀಫ್ ಹಾಜಿ ಉಳ್ಳಾಲ, ಹಮೀದ್ ಬಜ್ಪೆ, ಇಸ್ಹಾಕ್ ಝುಹ್ರಿ, ಮುಹಮ್ಮದ್ ಆಶಿಫ್ ಕೃಷ್ಣಾಪುರ, ಅಬ್ದುಲ್ ರಹ್ಮಾನ್ ಪ್ರಿಂಟೆಕ್, ರವೂಫ್ ಹಿಮಮಿ ಹಳೆಯಂಗಡಿ, ರಹೀಂ ಸಅದಿ ಖತರ್, ಇಬ್ರಾಹೀಂ ಖಲೀಲ್ ಮಾಲಿಕಿ , ಹಾಫಿಳ್‌ಯಾಕೂಬ್ ಸಅದಿ ನಾವೂರು , ಬಿಎಚ್ ಇಸ್ಮಾಯಿಲ್ , ಇಸ್ಮಾಯಿಲ್ ಕಿನ್ಯ, ನವಾಝ್ ಸಖಾಫಿ ಅಡ್ಯಾರ್ ಪದವು, ಜಬ್ಬಾರ್ ಕಣ್ಣೂರು, ಸಿನಾನ್ ಸಖಾಫಿ ಅಜಿಲಮೊಗರು, ಶಾಕಿರ್ ಎಎಸ್‌ಸಿ,ಹಸನ್ ಪಾಂಡೇಶ್ವರ , ರಝಾಕ್ ಭಾರತ್, ತೌಸಿಫ್ ಸಅದಿ ಹರೇಕಳ, ಹಾಫಿಳ್ ಮಜೀದ್ ಸಖಾಫಿ ಗಾಣೆಮಾರ್, ಬದ್ರುದ್ದೀನ್ ಅಝ್ಹರಿ ಕೈಕಂಬ ಇಬ್ರಾಹೀಂ ಅಹ್ಸನಿ ಮಂಜನಾಡಿ, ಹನೀಫ್ ಇಂಜಿನಿಯರ್ ಪೇರಿಮಾರ್ , ನಝೀರ್ ಹಾಜಿ ಲುಲು ಮತ್ತಿತರರು ರ್ಯಾಲಿಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News