×
Ad

ಮೂಡುಬಿದಿರೆ | ಕಸಮುಕ್ತ ಪರಿಸರವನ್ನು ಸೃಷ್ಠಿಸೋಣ : ರಾಯಪ್ಪ

Update: 2025-11-22 00:40 IST

ಮೂಡುಬಿದಿರೆ: ಪರಿಸರ ಅಮೂಲ್ಯವಾದುದು. ಆದರೆ ನಾವಿಂದು ಭೂಮಿ, ಗಾಳಿ, ನೀರನ್ನು ತ್ಯಾಜ್ಯದಿಂದ ತುಂಬಿ ನಾಶ ಮಾಡುತ್ತಿದ್ದೇವೆ. ನಮ್ಮ ಊರು, ನಮ್ಮ ಪರಿಸರ ಎಂಬ ಭಾವನೆೆ ನಮ್ಮಲ್ಲಿ ಮೂಡಿದಾಗ ಪರಿಸರದ ಬಗ್ಗೆ ಜವಾಬ್ದಾರಿ ಹೆಚ್ಚುತ್ತದೆ ಈ ಮೂಲಕ ಕಸಮುಕ್ತ ಪರಿಸರವನ್ನು ಸೃಷ್ಠಿಸೋಣ ಎಂದು ಉಡುಪಿ ನಗರಸಭೆಯ ನಿವೃತ್ತ ಆಯುಕ್ತ ರಾಯಪ್ಪ ಹೇಳಿದರು.

ಮೂಡುಬಿದಿರೆ ಕೋ ಆಪರೇಟಿವ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮದ ಕೊನೆಯ ದಿನವಾಗಿರುವ ಗುರುವಾರದಂದು ನಡೆದ ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು 'ಯುವಜನ-ಸೇವೆ-ಸಹಕಾರ' ಎಂಬ ವಿಷಯದ ಬಗ್ಗೆ ಮಾತನಾಡಿದರು.

ತ್ಯಾಜ್ಯವನ್ನು ಮನೆಯಲ್ಲಿಯೆ ಹಸಿ ಮತ್ತು ಒಣ ಕಸಗಳನ್ನು ವಿಂಗಡಣೆ ಮಾಡಿ ಹಸಿ ಕಸವನ್ನು ಗೊಬ್ಬರವಾಗಿ ಬಳಸಿ ಇದರಿಂದ ಪೌರಕಾರ್ಮಿಕರ ಕೆಲಸ ಕಡಿಮೆ ಮಾಡಿದಂತ್ತಾಗುತ್ತದೆ. ಹಾನಿಕಾರಕ ಬಾಟಲ್ ನೀರು, ಪ್ಲಾಸ್ಟಿಕ್ ಬಳಕೆ, ಪೇಪರ್ ಗ್ಲಾಸ್ ನಿಷೇಧವಿದ್ದರೂ ನಾವು ಅದನ್ನೇ ಬಳಸುವ ಮೂಲಕ ಕ್ಯಾನ್ಸರ್ ನಂತಹ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು, ಯುವ ಜನಾಂಗ ಸಹಕಾರಿ ಸಂಸ್ಥೆಗಳಲ್ಲಿ ಪಾಲ್ಗೊಂಡು ಎಲ್ಲಾ ಸಹಕಾರಗಳನ್ನು ಪಡೆದು ಅಭಿವೃದ್ಧಿಯನ್ನು ಹೊಂದಬೇಕೆಂದು ಸಲಹೆ ನೀಡಿದರು.

ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲೆ ನಿಕೇತನ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು.

ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮಾತನಾಡಿದರು.

ಬೀಳ್ಕೊಡುಗೆ :

ಸೊಸೈಟಿಯಿಂದ ಈ ವರ್ಷ ನಿವೃತ್ತರಾಗಲಿರುವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುವೀರ ಕಾಮತ್, ಹಾಗೂ ಜವಾನ ಶೇಖರ ಅವರನ್ನು ಸನ್ಮಾನಿಸಿ ಬಿಳ್ಕೊಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ರಾಜೇಶ ಸೇರ್ವೆಗಾರ್, ರಾಜು, ಮಡಿವಾಳ, ಸೂರಜ್ ಜೈನ್, ಮೋಹನ ದೇವಾಡಿಗ, ವಿಶ್ವನಾಥ ದೇವಾಡಿಗ, ಅಬೂಬಕ್ಕರ್, ಪದ್ಮನಾಭ ದೇವಾಡಿಗ, ಗೋಪಾಲ ಸುವರ್ಣ, ಸಂಜೀವ ಪೂಜಾರಿ ಯರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಮಂಗಳೂರು ಉಪವಿಭಾಗ ಸಹಕಾರ ಸಂಘಗಳ ಸಹಾಯಕ ನಿಬಂಧಕ ತ್ರಿವೇಣಿ ಎಸ್ ರಾವ್, ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗಣೇಶ್ ಕಾಮತ್ ಅತಿಥಿಗಳನ್ನು ಪರಿಚಯಗೈದರು. ಚೇತನಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸುದರ್ಶನ್ ಭಟ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News