×
Ad

ಮಂಗಳೂರು: ಪತ್ನಿಯಿಂದ ಪತಿಗೆ ಹಲ್ಲೆ ಆರೋಪ; ಪ್ರಕರಣ ದಾಖಲು

Update: 2024-01-15 21:07 IST

ಮಂಗಳೂರು: ತನಗೆ ವಿಚ್ಛೇದನೆ ನೀಡಬೇಕು ಎಂದು ಒತ್ತಾಯಿಸಿದ್ದಲ್ಲದೆ, ವಿಚ್ಛೇದನೆ ನೀಡಲು ನಿರಾಕರಿಸಿದ್ದ ಪತಿಗೆ ಹಲ್ಲೆ ಗೈದ ಘಟನೆ ಕುಲಶೇಖರ ಬಳಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜ.13ರಂದು ರಾತ್ರಿ ತಾನು ಸಿರ್ಲಾಪಡ್ಪು ರಸ್ತೆಯಲ್ಲಿ ತನ್ನ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಪತ್ನಿ ರೇಣುಕಾ ಆಂಟೋನಿ ಡಿಸೋಜ ಹಾಗೂ ರಾಜೇಶ್ ಎಂಬವರು ಸ್ಕೂಟರ್‌ನಲ್ಲಿ ಬಂದಿದ್ದರು. ಪತ್ನಿಯು ನನ್ನಲ್ಲಿ ‘ನನಗೆ ಡೈವರ್ಸ್’ ಕೊಡು ಎಂದು ಕೇಳಿದಾಗ, ತಾನು ಕೊಡುವುದಿಲ್ಲ ಎಂದು ಪ್ರತಿಕ್ರಿಯಿಸಿದೆ. ಆವಾಗ ಪತ್ನಿ ತನ್ನ ಬಲ ಕೆನ್ನೆಗೆ ಕೈಯಿಂದ ಹಲ್ಲೆಗೈದರೆ, ಆಕೆಯ ಜತೆಗಿದ್ದ ರಾಜೇಶ್ ತನ್ನ ಕೈಯಲ್ಲಿದ್ದ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಪತ್ನಿ ಕಲ್ಲಿನಿಂದ ಹಲ್ಲೆ ನಡೆಸಿ ‘ನೀನು ಡೈವರ್ಸ್ ಕೊಡದಿದ್ದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದಾಳೆ ಎಂದು ಕುಲಶೇಖರ ನಿವಾಸಿ ಆಂಟೋನಿ ಡಿಸೋಜ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News