ಉಪ್ಪಿನಂಗಡಿ: ತಂಡದಿಂದ ವೃದ್ಧಗೆ ಹಲ್ಲೆ, ಕೊಲೆ ಬೆದರಿಕೆ
Update: 2024-05-27 22:04 IST
ಉಪ್ಪಿನಂಗಡಿ: ತಂಡವೊಂದು ವೃದ್ಧರೋರ್ವರಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಘಟನೆ ನೆಲ್ಯಾಡಿಯ ಬಾರೊಂದರಲ್ಲಿ ನಡೆದಿದೆ.
ನೆಲ್ಯಾಡಿಯ ಜೋಳಿ ಜೋಸೆಫ್ ಹಲ್ಲೆಗೊಳಗಾದ ವೃದ್ಧ. ಇವರು ಮೇ 26ರಂದು ಮಧ್ಯಾಹ್ನ ಬಾರ್ಗೆ ತೆರಳಿದ್ದು, ಈ ಸಂದರ್ಭ ಆರೋಪಿಗಳಾದ ಕುಲದೀಪ್, ಬಿಪಿನ್ ಹಾಗೂ ಅಜೇಯ ಎಂಬವರು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.