×
Ad

ಉಳ್ಳಾಲ ನಗರ ಸಭೆ ಸಾಮಾನ್ಯ ಸಭೆ; ಜಲಸಿರಿ ಯೋಜನೆಗೆ 14 ಲಕ್ಷ ರೂ. ಪಾವತಿಗೆ ಆಕ್ಷೇಪ

Update: 2025-08-05 21:41 IST

ಉಳ್ಳಾಲ: ಬಹು ನೀರಾವರಿ ಕುಡಿಯುವ ನೀರು ಸರಬರಾಜು ಯೋಜನೆ ಗೆ ನಗರ ಸಭೆ 14 ಲಕ್ಷ ನೀಡುವ ವಿಚಾರದಲ್ಲಿ ವ್ಯಾಪಕ ಆಕ್ಷೇಪ ಉಳ್ಳಾಲ ನಗರ ಸಭೆ ಸಾಮಾನ್ಯ ಸಭೆಯಲ್ಲಿ ನಡೆಯಿತು.

ನಗರಸಭೆ ಅಧ್ಯಕ್ಷೆ ಶಶಿಕಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ದಿನಕರ್ ಉಳ್ಳಾಲ ಉಳ್ಳಾಲ ತಾಲೂಕಿನ ಪಜೀರ್ ಗ್ರಾಮದಲ್ಲಿ ಬಹು ನೀರಾವರಿ ಕುಡಿಯುವ ನೀರಿನ ಶುದ್ಧೀಕರಣ ಘಟಕ ನಿರ್ಮಾಣ ಆಗಿದೆ. ಅಂದಾಜು 200 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ. ಇದಕ್ಕೆ ನಗರಸಭೆ 14 ಲಕ್ಷ ಯಾಕಾಗಿ ನೀಡಬೇಕು ? ಈ ನೀರು ಉಳ್ಳಾಲ ಕ್ಕೆ ಬರುತ್ತದೆ ಯೇ , ಈ ಯೋಜನೆ ಗೆ14 ಲಕ್ಷ ನೀಡಬೇಕು ಎಂದು ಸಭೆಯಲ್ಲಿ ನಿರ್ಣಯ ಆಗಿದೆಯೇ ಎಂದು ಪ್ರಶ್ನಿಸಿದರು.

ಪೌರಾಯುಕ್ತ ನವೀನ್ ಹೆಗ್ಡೆ ಮಾತನಾಡಿ, ಬಹು ನೀರಾವರಿ ಕುಡಿಯುವ ನೀರಿನ ಯೋಜನೆ ತಾಲೂಕಿಗೆ ಸಂಬಂಧ ಪಟ್ಟದ್ದು. ಈ ನೀರು ಉಳ್ಳಾಲಕ್ಕೂ ಬರುತ್ತದೆ. ಇದರ ವೆಚ್ಚ ತಾಲೂಕು ವ್ಯಾಪ್ತಿಯ ಗ್ರಾ.ಪಂ. ಹಾಗೂ ನಗರಸಭೆ ಹಂಚಬೇಕು. ಹಣ ನೀಡುವ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಬೇಕು ಎಂದರು.

ಅಯ್ಯೂಬ್ ಮಂಚಿಲ ಮಾತನಾಡಿ, ಈ ಯೋಜನೆ ಯಡಿ ಕುಡಿಯುವ ನೀರು ಸರಬರಾಜು ಆಗುತ್ತದೆ.ಹಣ ನೀಡುವ ವಿಚಾರದಲ್ಲಿ ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.

ಅಮೃತ್ 2.0 ಕುಡಿಯುವ ನೀರಿನ ಯೋಜನೆ ಕಾಮಗಾರಿಯ ಅವ್ಯವಸ್ಥೆ ಬಗ್ಗೆ ಸಹಾಯಕ ಇಂಜಿನಿಯರ್ ಶ್ರೀಕಾಂತ್ ಅವರನ್ನು ಸದಸ್ಯರು ತರಾಟೆಗೈದರು.

ಕೌನ್ಸಿಲರ್ ಬಶೀರ್ ಮಾತನಾಡಿ, ಅಮೃತ್ 2.0 ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಯಿಂದಾಗಿ ಹೊಸ ಇಂಟರ್ ಲಾಕ್ ಅಗೆದು ಹಾಕಿದ್ದಾರೆ. ಇದನ್ನು ಯಾಕೆ ದುರಸ್ತಿ ಪಡಿಸಿಲ್ಲ ಎಂದು ಪ್ರಶ್ನಿಸಿದರು.

ಕೌನ್ಸಿಲರ್ ಗೀತಾ ಬಾಯಿ ಮಾತನಾಡಿ, ಕಾಮಗಾರಿ ಅರ್ಧಂಬರ್ಧ ಮಾಡಿಡುವುದು ಬೇಡ. ಒಂದಡೆ ಆರಂಭಿಸಿದ ಕೆಲಸ ಸರಿಯಾಗಿ ಪೂರ್ತಿ ಮಾಡಿ ಕೊಡಿ ಎಂದರು.

ಕೌನ್ಸಿಲರ್ ಚಿತ್ರ ಮಾತನಾಡಿ, ಒಳಪೇಟೆಯಲ್ಲಿ ಇಂಟರ್ ಲಾಕ್ ಅಗೆದು ಹಾಕಿದ ಕಾರಣ ಕಾಂಪೌಂಡ್ ಗೋಡೆ ಬಿದ್ದಿದೆ. ಮನೆಗೂ ತೊಂದರೆ ಆಗಿದೆ. ಪೈಪ್ ಲೈನ್ ಜೋಡಣೆ ಸರಿಯಾಗಿಲ್ಲ.ಇದರಿಂದ ನೀರಿನ ಜೊತೆ ಮಣ್ಣು ಕೂಡ ಬರುತ್ತದೆ ಎಂದರು.

ಕೌನ್ಸಿಲರ್ ರೇಶ್ಮಾ ಮಾತನಾಡಿ, ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕ ನೀಡಿಲ್ಲ.‌ನೀರಿನ ವಿಚಾರದಲ್ಲಿ ‌ತಾರತಮ್ಯ ಮಾಡುವುದು ಬೇಡ ಎಂದರು.

ಸಹಾಯಕ ಇಂಜಿನಿಯರ್ ಶ್ರೀಕಾಂತ್ ಮಾತನಾಡಿ ಮಳೆಗಾಲ ಆದ ಕಾರಣ ತಾತ್ಕಾಲಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದೆ.ಮಳೆಗಾಲ ಮುಗಿದ ಬಳಿಕ ಈ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು ಎಂದು ಭರವಸೆ ನೀಡಿದರು.

ದಾಖಲೆ ಸರಿ ಇದ್ದವರಿಗೆ ಎ. ಖಾತೆ, ಸರಿಯಾಗಿ ಇಲ್ಲದವರಿಗೆ ಬಿ ಖಾತೆ ನೀಡಿದ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ದಿನಕರ್ ಉಳ್ಳಾಲ ಬಿ ಖಾತೆ ಹೊಂದಿದವರು ಎರಡು ಪಟ್ಟು ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದರಿಂದ ಬಡವರಿಗೆ ಕಷ್ಟ ಆಗುತ್ತಿದೆ ಎಂದರು.

ಪೌರಾಯುಕ್ತ ನವೀನ್ ಹೆಗ್ಡೆ ಮಾತನಾಡಿ ಜಾಗದ ಕನ್ವರ್ಷನ್ ಸರಿಪಡಿಸಿ ದಾಖಲೆ ಸರಿಪಡಿಸಬೇಕು. ಕನ್ವರ್ಷನ್ ಮಾಡದ ಜಾಗವನ್ನು ಬಿ ಖಾತೆ ಯಲ್ಲಿ ಗುರುತಿಸಲಾಗಿದೆ ಎಂದರು.

ಸದನದ ಗಮನಕ್ಕೆ ತಾರದೆ ಪಟ್ಟಣ ವ್ಯಾಪಾರ ಸಮಿತಿ ಗೆ ನಗರ ಸಭೆ ಉಪಾಧ್ಯಕ್ಷ ಸಪ್ನಾ ಹರೀಶ್ ಅವರನ್ನು ನೇಮಿಸಿ ನಿರ್ಣಯ ಕೈಗೊಂಡ ಬಗೆ ಕೌನ್ಸಿಲರ್ ನಮಿತ ಆಕ್ಷೇಪ ವ್ಯಕ್ತಪಡಿಸಿದಾಗ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆದು ಕೋಲಾಹಲ ಸೃಷ್ಟಿಯಾಯಿತು.

ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರು ಹಾಜರಾದ ಬಗೆ ಕೌನ್ಸಿಲರ್ ಜಬ್ಬಾರ್ ಆಕ್ಷೇಪ ವ್ಯಕ್ತಪಡಿಸಿದರು.

ಕೌನ್ಸಿಲರ್ ಖಲೀಲ್ ಮಾತನಾಡಿ ಅಧಿಕಾರಿಗಳು ಇಲ್ಲದೇ ಸಮಸ್ಯೆ ಯಾರ ಬಳಿ ಕೇಳಬೇಕು ಎಂದು ಪ್ರಶ್ನಿಸಿದರು.

ನಗರಸಭೆ ಯಲ್ಲಿ ಅಧಿಕಾರಿಗಳ ಜತೆ ಅಧ್ಯಕ್ಷರು ಸುದ್ದಿ ಗೋಷ್ಠಿ ನಡೆಸಿದ ವಿಚಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ದಿನಕರ್ ಉಳ್ಳಾಲ, 60 ಕೋಟಿ ವೆಚ್ಚದಲ್ಲಿ ಕಾಮಗಾರಿ ಆಗಿದೆ ಎಂದು ಅಧ್ಯಕ್ಷರು ಸುದ್ದಿ ಗೋಷ್ಠಿ ಯಲ್ಲಿ ಹೇಳಿದ್ದಾರೆ . ಈ ಕಾಮಗಾರಿ ಎಲ್ಲಿ ಆಗಿದೆ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಿತು.

ಸಭೆಯಲ್ಲಿ ಉಪಾಧ್ಯಕ್ಷ ಸಪ್ನಾ ಹರೀಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News