ಉಳ್ಳಾಲ | ರಹ್ಮಾನಿಯಾ ಜುಮಾ ಮಸೀದಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ
ಉಳ್ಳಾಲ: ರಹ್ಮಾನಿಯಾ ಜುಮಾ ಮಸೀದಿ ಹಾಗೂ ಬುಸ್ತಾನುಲ್ ಉಲೂಮ್ ಮದರಸ ಪೇಟೆ ಉಳ್ಳಾಲ ವತಿಯಿಂದ ಮಸೀದಿ ವಠಾರದಲ್ಲಿ ಭಾರತದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಿಯುದ್ದೀನ್ ಹಸನ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಸ್ಲಾಂ ಧರ್ಮವನ್ನು ನಿಜವಾಗಿ ಪ್ರೀತಿಸುವ ವ್ಯಕ್ತಿ ತನ್ನ ರಾಷ್ಟ್ರವನ್ನೂ ಪ್ರೀತಿಸಬೇಕು. ದೇಶಪ್ರೇಮವು ಇಸ್ಲಾಮಿನ ಅವಿಭಾಜ್ಯ ಭಾಗವಾಗಿದೆ ಎಂದು ಹೇಳಿದರು.
ರಹ್ಮಾನಿಯಾ ಜುಮಾ ಮಸೀದಿ ಕಾರ್ಯದರ್ಶಿ ಮುಸ್ತಫಾ ಅಹ್ಮದ್ ಅವರು ಗಣರಾಜ್ಯೋತ್ಸವದ ಮಹತ್ವದ ಕುರಿತು ಸಂದೇಶ ನೀಡಿದರು. ಬುಸ್ತಾನುಲ್ ಉಲೂಮ್ ಮದರಸ ಸದರ್ ಬಿ.ಕೆ. ಅಬ್ದುಲ್ ಖಾದರ್ ಮದನಿ ಅವರು ದುವಾ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪೇಟೆ ಜುಮಾ ಮಸೀದಿ ಉಪಾಧ್ಯಕ್ಷ ನಝೀರ್ ಕರಾವಳಿ, ಸದಸ್ಯರಾದ ಶರೀಫ್, ಶರಾಫತ್, ಅಜೀಮ್ ಬಸ್ತಿಪಡ್ಡು, ಫಾರೂಕ್ ಸಾದುಕಾನ, ಪೊತ್ತುಬಾವಾ ಪೇಟೆ, ಆಫ್ರಿದ್ ಕೊಟ್ಟಾರ, ನಾಸೀರ್ ಮುಸ್ಲಿಯಾರ್, ಇಲ್ಯಾಸ್ ಕೊಟ್ಟಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪೇಟೆ ಜುಮಾ ಮಸೀದಿ ಜೊತೆಗೆ ಕಾರ್ಯದರ್ಶಿ ತೌಸಿಫ್ ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.