ದಿಲ್ಲಿಯಲ್ಲಿ ವಾಯು ಮಾಲಿನ್ಯ ಹೆಚ್ಚಳ | ಸಂಸತ್ತಿನ ಆವರಣದಲ್ಲಿ ಚಂದ್ರಶೇಖರ್ ಆಝಾದ್ ಪ್ರತಿಭಟನೆ
Screengrab:X/@PTI_News
ಹೊಸದಿಲ್ಲಿ: ದಿಲ್ಲಿಯಲ್ಲಿ ವಾಯು ಮಾಲಿನ್ಯದ ಹೆಚ್ಚಳವನ್ನು ವಿರೋಧಿಸಿ ಸಂಸತ್ತಿನ ಆವರಣದಲ್ಲಿ ಸಂಸದ ಚಂದ್ರಶೇಖರ್ ಆಝಾದ್ ಪ್ರತಿಭಟನೆ ನಡೆಸಿದ್ದಾರೆ.
ಸಂಸತ್ತಿನ ಆವರಣದಲ್ಲಿ "ಗಾಳಿ ವಿಷಕಾರಿಯಾಗಿದೆ. ಸರಕಾರ ನಾಪತ್ತೆಯಾಗಿದೆ" ಎಂಬ ಬ್ಯಾನರ್ ಹಿಡಿದು ಸಂಸದ ಚಂದ್ರಶೇಖರ್ ಆಝಾದ್ ಪ್ರತಿಭಟನೆ ನಡೆಸಿದ್ದಾರೆ.
“ವಾಯು ಗುಣಮಟ್ಟ ಸೂಚ್ಯಂಕ(AQI) 450ಕ್ಕಿಂತ ಹೆಚ್ಚಾದರೂ ದಿಲ್ಲಿ ಸರಕಾರಕ್ಕೆ ಇದು ಏಕೆ ಗೋಚರಿಸುತ್ತಿಲ್ಲ? ದಿಲ್ಲಿಯ ಜನರು ಶುದ್ಧ ಗಾಳಿಗೆ ಅರ್ಹರು. ಗಾಳಿ ವಿಷಕಾರಿಯಾಗಿದೆ. ಆದರೆ ಸರಕಾರ ಏನನ್ನೂ ಮಾಡುತ್ತಿಲ್ಲ. ಅವರು ಈ ವಿಷಯವನ್ನು ಮರೆಮಾಚುತ್ತಿದ್ದಾರೆ” ಎಂದು ಚಂದ್ರಶೇಖರ್ ಆಝಾದ್ ಆರೋಪಿಸಿದ್ದಾರೆ.
VIDEO | Parliament winter session: MP Chandrashekhar Azad protests inside Parliament premises over Delhi pollution, holding a banner reading, "Zehrili hawa hai, sarkar lapata hai."
— Press Trust of India (@PTI_News) December 17, 2025
(Full video available on PTI Videos - https://t.co/n147TvrpG7) pic.twitter.com/tdN0WZoWbJ