×
Ad

ಉತ್ತರಾಖಂಡ | ಚಳಿ ಕಾಯಿಸಲು ಬೆಂಕಿ ಹಚ್ಚಿದ ದಂಪತಿಗಳು : ಉಸಿರುಗಟ್ಟಿ ಮೃತ್ಯು

Update: 2025-01-18 11:29 IST

ಸಾಂದರ್ಭಿಕ ಚಿತ್ರ 

ನ್ಯೂ ತೆಹ್ರಿ: ಇಲ್ಲಿನ ಹಳ್ಳಿಯೊಂದರಲ್ಲಿ ಚಳಿ ಕಾಯಿಸಲು ಬೆಂಕಿ ಹಚ್ಚಿದ ದಂಪತಿಗಳು ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ.

ಚಳಿ ತಡೆಯಲಾಗದೇ ಬೆಂಕಿಯ ಉರಿಯಲ್ಲಿ ಉಷ್ಣ ವಾತಾವರಣದಲ್ಲಿ ಮಲಗಲು ಯತ್ನಿಸಿದ ದಂಪತಿಗಳು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಭಿಲಂಗಣ ಪ್ರದೇಶದ ದ್ವಾರಿ-ಥಪ್ಲಾ ಗ್ರಾಮದಲ್ಲಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದೆ. ಮದನ್ ಮೋಹನ್ ಸೆಮ್ವಾಲ್ (52) ಮತ್ತು ಅವರ ಪತ್ನಿ ಯಶೋದಾ ದೇವಿ (48) ಮದುವೆ ಸಮಾರಂಭದಲ್ಲಿ ಭಾಗವಹಿಸಲು ಗ್ರಾಮಕ್ಕೆ ಬಂದಿದ್ದರು ಎಂದು ದ್ವಾರಿ-ಥಪ್ಲಾ ಗ್ರಾಮ ಆಡಳಿತಾಧಿಕಾರಿ ರಿಂಕಿ ದೇವಿ ತಿಳಿಸಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಚಳಿಯಿಂದಾಗಿ ಬೆಂಕಿ ಹಚ್ಚಿ, ಅದನ್ನು ತಮ್ಮ ಕೋಣೆಯೊಳಗೆ ತೆಗೆದುಕೊಂಡು ಹೋಗಿ ಬಾಗಿಲು ಮುಚ್ಚಿ ಮಲಗಿದರು. ಶುಕ್ರವಾರ ಬೆಳಿಗ್ಗೆ, ಅವರ ಮಗ ಅವರನ್ನು ಎಬ್ಬಿಸಲು ಹೋದಾಗ ಯಾರೂ ಬಾಗಿಲು ತೆರೆಯಲಿಲ್ಲ ಎಂದು ದೇವಿ ಹೇಳಿದರು.

ಸ್ವಲ್ಪ ಸಮಯದವರೆಗೆ ಯಾವುದೇ ಪ್ರತಿಕ್ರಿಯೆ ಸಿಗದ ನಂತರ, ಸ್ಥಳೀಯರು ಬಾಗಿಲು ಒಡೆದು ನೋಡಿದಾಗ ದಂಪತಿಗಳು ಹಾಸಿಗೆಯ ಮೇಲೆ ಮೃತಪಟ್ಟಿರುವುದು ಕಂಡುಬಂದಿದೆ ಎಂದು ರಿಂಕಿ ದೇವಿ ಹೇಳಿದರು. ಬೆಂಕಿ ಹಚ್ಚಿದಾಗ ಉಂಟಾದ ಹೊಗೆಯಿಂದ ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡ್ ಅನಿಲದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.

ಸೆಮ್ವಾಲ್ ಅವರು ಸರಸ್ವತಿ ಸೈನ್‌ನ ಸರ್ಕಾರಿ ಇಂಟರ್ ಕಾಲೇಜಿನಲ್ಲಿ ಗುಮಾಸ್ತರಾಗಿದ್ದರು ಎಂದು ಗ್ರಾಮ ಆಡಳಿತಾಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News