×
Ad

ಕನ್ಹಯ್ಯಾ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡ ":ಶೆಹ್ಲಾ ರಶೀದ್ ಆರೋಪ

Update: 2016-03-11 12:27 IST

 ಬೆಂಗಳೂರು, ಮಾ.11: ಕನ್ನಯ್ಯ ಕುಮಾರ್  ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡ ಇದೆ ಎಂದು ಜೆ ಎನ್ ಯು ವಿವಿ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ  ಶೆಹ್ಲಾ ರಶೀದ್  ಅಭಿಪ್ರಾಯಪಟ್ಟಿದ್ದಾರೆ.
 ಶುಕ್ರವಾರ ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ : ಪತ್ರಕರ್ತರ ಅಧ್ಯಯನ ಕೇಂದ್ರದ ವತಿಯಿಂದ ಆಯೋಜಿಸಲಾದ  ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ  ಅವರು  ಮಾತನಾಡುತ್ತಿದ್ದಾರೆ.. ಅವರ ಮಾತಿನ ಮುಖ್ಯಾಂಶಗಳು
*ಕನ್ನಯ್ಯ ಕುಮಾರ್  ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡ ಇದೆ.

*ಜವಾಹರ್ ವಿವಿ ಕ್ಯಾಂಪಸ್ ನೊಳಗೆ ಆರ್ ಎಸ್ ಎಸ್ ಮಧ್ಯಪ್ರವೇಶ. ಮಾಡಿ ವಿದ್ಯಾರ್ಥಿಗಳ ನಡುವೆ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದೆ..ಇದು ಸರಿಯಲ್ಲ..

* ಬಿಜೆಪಿ ಸರ್ಕಾರ ವಿವಿ ಆವರಣದೊಳಗೆ ರಾಜಕೀಯ ಮಾಡುವುದು ಸರಿಯಲ್ಲ..

*ವಿವಿಗಳು ಸ್ವಾಯತ್ತ ಸಂಸ್ಥೆಗಳು..

* ಸಂವಿಧಾನದ ಇತಿಮಿತಿಯೊಳಗೆ ನಾವು ಹೋರಾಡುತ್ತಿದ್ದೇವೆ..

* ಅಫ್ಜಲ್ ಗುರು ಬಗ್ಗೆ ನಾವು ಮೃದುಧೋರಣೆ ತಳೆದಿಲ್ಲ..ವಿನಾಕಾರಣ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತಿದೆ..

*ದೇಶದ ಹಲವು ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.. ವಿದ್ಯಾರ್ಥಿಗಳ ಸಮಸ್ಯೆ ಬಗ್ಗೆ ನಾವು ಬೆಳಕು ಚೆಲ್ಲುವುದು ತಪ್ಪಾ..

*ಕನ್ನಯ್ಯ ಪ್ರಕರಣ ಇಡೀ ದೇಶದಲ್ಲಿಯೇ ಸಂಚಲವನ್ನ ಮೂಡಿಸಿದೆ.

*ಸಮಾಜವಾದಿ ಚಿಂತನೆಯ ಬಗ್ಗೆ ಮಾತನಾಡಿದ್ರೆ ಸಂಘಪರಿವಾರಕ್ಕೆ ಆಗುವುದಿಲ್ಲ..

*ದೇಶದ ಹಲವು ವಿವಿ ವಿದ್ಯಾರ್ಥಿ ಸಂಘಟನೆಗಳ ಮುಖಂಡರಿಗೆ ಬೆದರಿಕೆ ಕರೆಗಳು ಸಾಮಾನ್ಯ ವಾಗಿವೆ..

*ಆರ್ ಎಸ್ ಎಸ್ "ಘರ್ ವಾಪಸಿ,ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆಯಂತವುಗಳ ನಿಜ ಸ್ಥಿತಿ ಯ ಬಗ್ಗೆ ತಿಳಿಸಿದರೆ ಅದು ದೇಶದ್ರೋಹವೇ. ?.

*ಆರ್ ಎಸ್ ಎಸ್ ಎಲ್ಲಕ್ಕೂ ಮೂಗು ತೂರಿಸುತ್ತಿದೆ..ಹಿಂದೂ ರಾಷ್ಟ್ರದ ಬಗ್ಗೆ ವಿದ್ಯಾರ್ಥಿಗಳಲ್ಲಿ ಚಿಂತನೆ ಮೂಡಿಸುತ್ತಿದ್ದಾರೆ..ಕೇಂದ್ರ ದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಇದು ಹೆಚ್ಚಿದೆ..

*ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಇದು ಕಾನೂನಾಗಿ ಜಾರಿಯೂ ಆಗಿದೆ . ಆದರೆ ಬಿಜೆಪಿಯೇತರ ಆಡಳಿತವಿರುವ ರಾಜ್ಯಗಳಲ್ಲಿ ಇದನ್ನ ಬಲವಂತವಾಗಿ ಏರಲು ಕೇಂದ್ರ ಸರ್ಕಾರ ಮುಂದಾಗಿದೆ..
 *ದೇಶದ ಆದಿವಾಸಿ,ಪರಿಶಿಷ್ಟರು,ಬಡವರ ಹಕ್ಕು ಕೇಳುವುದು ತಪ್ಪೇ. ? ಕನ್ನಯ್ಯ ಕುಮಾರ್ ಕೇಳಿದ್ದೂ ಇದನ್ನೇ.. ಇದಕ್ಕೆ ಇಷ್ಟೇಲ್ಲಾ ರದ್ಧಾಂತ ಮಾಡಲಾಗಿದೆ..

*ಕೇಂದ್ರ ಸರ್ಕಾರ ನಿರಂಕುಶಾಧಿಕಾರಿಯಂತೆ ನಡೆದುಕೊಳ್ಳುತ್ತಿದೆ..

ಫೋಟೋ : ಯೂಸುಫ್ ಪಟೇಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News