ನಿತ್ಯಾನಂದ ಸ್ವಾಮಿ, ನಟಿ ರಂಜಿತಾ ತಿರುಮಲ ದೇವಳ ದರ್ಶನಕ್ಕೆ ತೆರಳಿದ ವೀಡಿಯೊ ಬಹಿರಂಗ
Update: 2016-03-14 04:34 GMT
ತಮಿಳ್ನಾಡು, ಮಾರ್ಚ್. 14: ವಿವಾದಾಸ್ಪದ ದೇವ ಮಾನವ ಸ್ವಾಮಿ ನಿತ್ಯಾನಂದ ಮತ್ತು ನಟಿ ರಂಜಿತ ತಿರುಮಲ ವೆಂಕಟೇಶ್ವೇರ ದೇವಾಲಯದ ದರ್ಶನಕ್ಕೆ ತೆರಳಿದ ವೀಡಿಯೊ ಈಗ ಹೊರಬಂದಿದೆ. ಕಳೆದ ಬುಧವಾರ ಇವರಿಬ್ಬರೂ ರಹಸ್ಯವಾಗಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.
ನಿತ್ಯಾನಂದನ ಹದಿನೈದು ಶಿಷ್ಯರೂ ಜೊತೆಯಲ್ಲಿದ್ದರು. ನಿತ್ಯಾನಂದ ಮತ್ತು ರಂಜೀತಾರ ಖಾಸಗಿ ಕ್ಷಣಗಳ ವೀಡಿಯೊ ಬಹಿರಂಗಗೊಂಡ ನಂತರ ಸ್ವಾಮಿ ವಿವಾದಕ್ಕೊಳಗಾಗಿದ್ದರು. ಆಶ್ರಮ ವಾಸಿಗಳಾದ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಇವರ ವಿರುದ್ಧ ಆರೋಪಿಸಿ ದೂರು ಸಲ್ಲಿಸಲಾಗಿದೆ. ಲೈಂಗಿಕ ವಿವಾದದ ನಂತರ ಇವರಿಬ್ಬರು ಸಾರ್ವಜನಿಕ ವೇದಿಕೆಗಳಲ್ಲಿ ಪ್ರತ್ಯಕ್ಷರಾಗಿಲ್ಲ. ವಿವಾದ ತಣ್ಣಗಾದ ಸಮಯದಲ್ಲಿ ಇವರಿಬ್ಬರೂ ತಿರುಮಲ ದೇವಳ ದರ್ಶನಕ್ಕೆ ತೆರಳಿದ್ದಾರೆ.