ಮಣಿ ಸಾವು ಇನ್ನೊಂದು ತಿರುವು: ಕುಟುಂಬ ಕಲಹ ಕಾರಣವೇ ಎಂಬ ಶಂಕೆಯಲ್ಲಿ ಪೊಲೀಸರು!

Update: 2016-03-21 10:20 GMT

ಚಾಲಕ್ಕುಡಿ, ಮಾರ್ಚ್21: ಕಲಾಭವನ್ ಮಣಿ ಮರಣ ಅಸಹಜವಾದುದೆಂದು ವಿಶೇಷ ತನಿಖಾ ತಂಡಕ್ಕೆ ಮನವರಿಕೆಯಾಗಿದ್ದು ಅದು ಆತ್ಮಹತ್ಯೆಯೋ ಕೊಲೆಯೋ ಎಂದು ಪರಿಶೀಲನೆ ನಡೆಸಲಾಗುತ್ತಿದೆಯೆಂದು ಕೇರಳ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ. ಕೊಚ್ಚಿ ಅಮೃತಾಆಸ್ಪತ್ರೆಯ ಚಿಕಿತ್ಸೆಯಲ್ಲಿ ಎಡವಟ್ಟು ಆಗಿದೆಯೆಂಬ ವಾದವೂ ಈಗ ಕೇಳಲಾರಂಭಿಸಿದೆ. ಆದರೆ ಕೀಟನಾಶಕ ಮಣಿಯ ಶರೀರಕ್ಕೆ ಸೇರಿರುವುದೇ ಮಣಿ ಸಾವಿಗೆ ಕಾರಣವೆಂದು ಪೊಲೀಸರಿಗೆ ದೃಢವಾಗಿದೆಯೆನ್ನಲಾಗಿದೆ. ಜೊತೆಗೆ ಮಣಿಗೆ ಮಹಿಳಾ ವೈದ್ಯೆಯೊಬ್ಬರೊಂದಿಗೆ ನಿಕಟತೆ ಇತ್ತು ಈಸಂಬಂಧ ಮನೆಯವರಿಗೂ ತಿಳಿದಿತ್ತು. ಈ ಕಾರಣದಿಂದಲೇ ಮಣಿಯಿಂದ ದೂರವಿರುತ್ತಿದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆನ್ನಲಾಗಿದೆ. ಕುಟುಂಬದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂಬ ಮನೆಯವರ ಹೇಳಿಕೆಯನ್ನು ಪೊಲೀಸರು ಸಂಶಯದ ನೆರಳಲ್ಲಿ ನೋಡುತ್ತಿದ್ದಾರೆ. ಆದ್ದರಿಂದ ಮಣಿಯ ಪತ್ನಿಯ ತವರು ಮನೆಯವರ ಮೇಲೆಯೂ ಶಂಕೆಯ ನೆರಳು ಹೊಳಾಡುತ್ತಿದೆ ಎಂದು ವರದಿಯಾಗಿದೆ.

ಕಲಾಭವನ್ ಮಣಿಯ ಮರಣ ಆತ್ನಹತ್ಯೆಯೋ ಕೊಲೆಯೋ ಎಂಬ ವಿಷಯದಲ್ಲಿನ್ನೂ ಸ್ಪಷ್ಟತೆ ದೊರಕಿಲ್ಲ. ಈ ಎರಡು ಸಾಧ್ಯತೆಗಳನ್ನು ಮುಂದಿಟ್ಟು ತನಿಖೆ ಮುಂದುವರಿಯುತ್ತಿದೆ. ಆತ್ಮಹತ್ಯೆಯಾದರೆ ಅದಕ್ಕೆ ಕಾರಣವೇನೆಂದು ಕಂಡು ಹುಡುಕಬೇಕಾಗಿದೆ. ಮಣಿ ತಿಳಿಯದೆ ಕೀಟನಾಶಕ ಮಿಶ್ರಣಮಾಡಿ ಕುಡಿದಿದ್ದಾದರೆ ಅದೂ ತನಿಖೆ ಆಗಬೇಕಾಗಿದೆ. ಅತ್ಯಂತ ಗಾಢ ವಾಸನೆಯ ಕೀಟನಾಶಕವನ್ನು ಮಣಿಗೆ ಯಾರಿಗಾದರೂ ಕುಡಿಸಲು ಸಾಧ್ಯವಿದೆಯೇ? ಎಂಬ ಶಂಕೆ ಉದ್ಭವಿಸಿದೆಯೆನ್ನಲಾಗಿದೆ. ಮಣಿ ಮದ್ಯ ಕುಡಿದು ಸ್ಥಿಮಿತ ಇಲ್ಲದ ಸ್ಥಿತಿಯಲ್ಲಿ ಕೀಟನಾಶಕ ಬಳಸಿರಬಹುದೆಂಬ ಅಭಿಪ್ರಾಯವೂ ಪೊಲೀಸರಲ್ಲಿದೆ.

ಮಣಿಯ ಗೆಳೆಯರು ಮತ್ತು ಕೊನೆಯ ದಿವಸ ಔಟ್ ಹೌಸ್‌ನಲ್ಲಿರುವವರನ್ನು ಪ್ರಶ್ನಿಸುವ ಕಾರ್ಯ ಮುಂದುವರಿದಿದೆ. ಮಣಿಸಾವಿಗೆ ಕ್ಲೋರ್‌ಪೈರಿಫೋಸ್ ಕೀಟನಾಶಕ ಪ್ರಯೋಗ ಕಾರಣವೆಂದು ಹೇಳಲಾಗುತ್ತಿದೆ. ಅದರ ಬಾಟ್ಲಿ ಮಣಿಯ ಬಾಳೆ ತೋಟದಲ್ಲಿ ಪತ್ತೆಯಾಗಿದ್ದವು. ಇಂತಹ ಕೀಟನಾಶಕಗಳನ್ನು ಚಾಲಕ್ಕುಡಿಯ ನಾಲ್ಕು ವ್ಯಾಪಾರಿ ಮಳಿಗೆಗಳಲ್ಲಿ ದೊರಕುತ್ತಿವೆ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಮಣಿಯ ಇಬ್ಬರು ನಿಕಟ ಬಂಧುಗಳ ಮೇಲೆಯೂ ಶಂಕೆಯ ಮೊನೆ ವ್ಯಾಪಿಸಿದೆ. ಮಣಿ ಅಸಹಜ ಸಾವಿನ ನಂತರ ಇವರ ವರ್ತನೆಗಳಲ್ಲಿ ಬದಲಾವಣೆಗಳಾಗಿರುವುದು ಇದಕ್ಕೆ ಕಾರಣವೆನ್ನಲಾಗಿದೆ. ಇವರನ್ನು ಕೂಡಲೇ ಪ್ರಶ್ನಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ. ತನಿಖೆ ಪತ್ನಿಯ ಸಂಬಂಧಿಕರ ಕಡೆಗೂ ವ್ಯಾಪಿಸಿದೆ. ಮಣಿಯ ಆಸ್ತಿವಿವಾದ ಮರಣಕ್ಕೆ ಕಾರಣವಾಯಿತೇ ಎಂಬ ಶಂಕೆಯೂ ಈಗ ಉದ್ಭವಿಸಿದೆ. ಆದ್ದರಿಂದ ತನಿಖೆ ಈ ದಿಕ್ಕಿನಲ್ಲಿಯೂ ನಡೆಯುತ್ತಿದೆ. ಮಣಿ ಗಾಂಜಾದಂತಹ ಮಾದಕವಸ್ತುಗಳನ್ನು ಬಳಸಿದ್ದರೆಂದು ಮಣಿಗೆ ಚಿಕಿತ್ಸೆ ನೀಡಿದ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ನಡೆಸಲಾದ ಮೂತ್ರ ಸ್ಯಾಂಪಲ್‌ನ ಪರೀಕ್ಷೆಯಲ್ಲಿ ಪತ್ತೆಂಾಗಿದೆ. ಇದರ ವರದಿ ನಿನ್ನೆ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News