ಪಶ್ಚಿಮ ಬಂಗಾಳದಲ್ಲಿ ಬಾಂಬ್ ಸ್ಫೋಟ:ಟಿಎಂಸಿ ಪಂಚಾಯತ್ ಪ್ರಧಾನ ಸಹಿತ ಆರು ಮಂದಿ ಹತ್ಯೆ, ಅನೇಕರಿಗೆ ಗಾಯ

Update: 2016-05-02 06:47 GMT

ಕೋಲ್ಕತಾ, ಮೆ 2: ಪಶ್ಚಿಮಂಗಾಳದ ಮಾಲ್ಡಾದಲ್ಲಿ ತೃಣಮೂಲ ಕಾಂಗ್ರೆಸ್‌ನ ಪಂಚಾಯತ್ ಪ್ರಧಾನ ಸಹಿತ ಆರು ಮಂದಿಯನ್ನು ಬಾಂಬು ಸ್ಫೋಟಿಸಿ ಹತ್ಯೆ ಎಸಗಲಾಗಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ ಹತ್ಯೆಯನ್ನು ಕಾಂಗ್ರೆಸ್ ಬೆಂಬಲಿಗರು ಎಸಗಿದರೆಂದು ಆರೋಪಿಸಲಾಗಿದೆ. ಮಾಲ್ಡಾದ ಜೈನ್‌ಪುರದಲ್ಲಿ ಈ ಘಟನೆ ನಡೆದಿದ್ದು ಚುನಾವಣೆಯಲ್ಲಿ ಕಾಂಗ್ರೆಸ್ ವೋಟು ಹಾಕಿಲ್ಲ ಎಂದು ನೆಪ ಮುಂದಿಟ್ಟು ಬಾಂಬು ಸ್ಫೋಟಗೊಳಿಸಿ ಆರು ಮಂದಿಯನ್ನು ಕೊಲೆಗೈಯ್ಯಲಾಗಿದೆ ಎಂದು ಹೇಳಲಾಗುತ್ತಿದೆ.

ಪೊಲೀಸ್ ರು ಪ್ರಕರಣದ ತನಿಖೆ ನಡೆಸುತ್ತಿದ್ದು ಬಾಂಬ್‌ಸ್ಫೋಟದಿಂದ ಇನ್ನೂ ಅನೇಕರು ಗಾಯಕಗೊಂಡಿದ್ದಾರೆ. ಗಾಯಾಳಗಳನ್ನು ಮಾಲ್ಡಾದ ಮೆಡಿಕಲ್ ಕಾಲೇಜ್‌ಗೆ ಸೇರಿಸಲಾಗಿದ್ದು ಚಿಕಿತ್ಸೆ ಮುಂದುವರಿಯುತ್ತಿದೆ. ಕಾಂಗ್ರೆಸ್ ಈಘಟನೆಯ ಹಿಂದೆ ಎಂಬುದನ್ನು ಮಾಲ್ಡಾ ಜಲ್ಲೆಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ನರೇಂದ್ರನಾಥ ತಿವಾರಿ ನಿರಾಕರಿಸಿದ್ದು, ಇದು ಸುಳ್ಳಾರೋಪವಾಗಿದೆ. ಕಾಂಗ್ರೆಸ್ ಇಂತಹ ಹೀನ ಕೃತ್ಯವೆಸಗುವುದಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News