ಉತ್ತರಖಂಡ ವಿಶ್ವಾಸ ಮತ ಯಾಚನೆಯಿಂದ 9 ಕಾಂಗ್ರೆಸ್ ಶಾಸಕರು ಹೊರಗೆ

Update: 2016-05-06 09:17 GMT

ಹೊಸದಿಲ್ಲಿ, ಮೇ 6: ಉತ್ತರ ಖಂಡ ವಿಧಾನ ಸಭೆಯಲ್ಲಿ ಮೇ 10 ರಂದು ನಡೆಯಲಿರುವ ವಿಶ್ವಾಸ ಮತ ಯಾಚನೆಯಲ್ಲಿ ಅನರ್ಹ ಗೊಂಡಿರುವ 9 ಕಾಂಗ್ರೆಸ್ ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರಿಂ ಕೋರ್ಟ್ ಶುಕ್ರವಾರ ಹೇಳಿದೆ. ಇದರಿಂದ ಕೇಂದ್ರ ಸರಕಾರಕ್ಕೆ ಹಾಗೂ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ. 

ಈ ಮೊದಲು ಸುಪ್ರೀಂ ಕೋರ್ಟ್ ಮೇಲುಸ್ತುವಾರಿಯಲ್ಲಿ ಉತ್ತರ ಖಂಡ ವಿಧಾನ ಸಭೆಯಲ್ಲಿ ವಿಶ್ವಾಸ ಮತ ನಡೆಸಲು ಕೇಂದ್ರ ಸರಕಾರ ಒಪ್ಪಿಗೆ ನೀಡಿತ್ತು. ಆದರೆ ಇದಕ್ಕೆ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರೊಬ್ಬರನ್ನು ವೀಕ್ಷಕರಾಗಿ ನೇಮಿಸಬೇಕು ಎಂದು ಹೇಳಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News