ಭೀಕರ ಅಪಘಾತ : ಟವೇರಾ-ಲಾರಿ ಡಿಕ್ಕಿ - ಎಂಟು ಸಾವು

Update: 2016-08-31 05:11 GMT

ಕೊಂಪಲ್ಲಿ, ಆ.31: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಸುತಾರಿಗುಡ ಎಂಬಲ್ಲಿ ಟೋಲ್‌ಗೇಟ್‌ ಬಳಿ ನಿಂತಿದ್ದ ಲಾರಿಗೆ ಟವೇರಾ ಡಿಕ್ಕಿ ಹೊಡೆದ ಪರಿಣಾಮವಾಗಿ ಟವೇರಾದಲ್ಲಿದ್ದ ಒಂದೇ ಕುಟುಂಬದ  ಎಂಟು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಟೋಲ್‌ ಕಟ್ಟಲು ನಿಂತಿದ್ದ ಲಾರಿಗೆ ಟವೇರಾ ಡಿಕ್ಕಿ ಹೊಡೆಯಿತು. ಇದೇ ವೇಳೆ ಹಿಂದಿನಿಂದ ಬಂದ ಬೃಹತ್‌ ಲಾರಿ ಟವೇರಾಕ್ಕೆ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಎರಡು ಲಾರಿಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿರುವ ಟವೇರಾದಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ  ಮೃತಪಟ್ಟರು. ಓರ್ವ ಗಾಯಗೊಂಡಿದ್ದಾನೆ. 
ಟವೇರಾ ಸದಾಶಿವಪೇಟ್‌ನಿಂದ ಕೊಂಪಲ್ಲಿಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ.  ಟವೇರಾದಲ್ಲಿದ್ದ  ಮುಹಮ್ಮದ್‌ ಅಖಿಲ್, ಅಕ್ಬರ‍್, ಇಮ್ರೋಜ್‌, ಇರ್ಫಾನ್‌, ಫಿರೋಝ್‌, ನಿಶಾದ್‌ , ಶೇಖಾವತ್‌ ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದಾರೆ.ಮದುವೆ ಸಮಾರಂಭದಲ್ಲಿ ಪಾಲ್ಗೊಂಡು  ವಾಪಸಾಗುತ್ತಿದ್ದಾಗ  ಈ ದುರ್ಘಟನೆ ನಡೆದಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News