ಒಎನ್‌ಜಿಸಿ ತೈಲ ಬಾವಿಗೆ ‘ಕನ್ನ’ ಹಾಕಿ ರಿಲಯನ್ಸ್ ಪಡೆದ ಅನಿಲ ಎಷ್ಟು ಸಾವಿರ ಕೋಟಿಯದ್ದು ಗೊತ್ತೇ ?

Update: 2016-09-03 05:57 GMT

ಮುಂಬೈ, ಸೆ.3: ಗುರುವಾರದ ರಿಲಿಯನ್ಸ್ ಜಿಯೋ 4ಜಿ ಸೇವೆಗಳ ಚಾಲನೆಯೇ ಮಾಧ್ಯಮಗಳಿಗೆ ಬಹಳ ದೊಡ್ಡ ಸುದ್ದಿಯಾಗಿ ಬಿಟ್ಟಿದೆ. ಆದರೆ ಈ ಜಿಯೋ ಗದ್ದಲದಲ್ಲಿ ಒಂದು ಪ್ರವುುಖ ಹಾಗೂ ರಿಲಯನ್ಸ್ ಗೆ ಸಂಬಂಧಪಟ್ಟ ಬಹುಮುಖ್ಯ ವಿಚಾರ ಸುದ್ದಿಯಾಗದೇ ಇದ್ದದ್ದು ಮಾತ್ರ ವಿಪರ್ಯಾಸ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ಯಾಯದ ಹಾದಿಯಮೂಲಕ ಕೃಷ್ಣ-ಗೋದಾವರಿನದಿ ದಂಡೆ ಪ್ರದೇಶದಲ್ಲಿನ ಒಎನ್‌ಜಿಸಿ ತೈಲ ಬಾವಿಯಿಂದ ಲಾಭ ಪಡೆದುಕೊಂಡಿದೆ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎ.ಪಿ. ಶಾಹ್‌ಏಕ ಸದಸ್ಯ ಆಯೋಗವುಜಿಯೋ ಸೇವೆ ಚಾಲನೆಯ ಮುನ್ನಾ ದಿನ, ಅಂದರೆ ಆಗಸ್ಟ್ 31 ರಂದುದೋಷಾರೋಪಣೆ ಮಾಡಿದೆ. ಇಂದಲ್ಲ ನಾಳೆ ಕಂಪೆನಿಗೆ ಸಂಕಷ್ಟ ತಂದೊಡ್ಡಲಿದೆಯೆಂಬುದು ಸ್ಪಷ್ಟ ಎಂದು ಸ್ಕ್ರೋಲ್.ಇನ್ ವರದಿಯೊಂದು ತಿಳಿಸಿದೆ.

ಆರ್‌ಐಎಲ್ ತನ್ನ ವಿದೇಶಿ ಪಾಲುದಾರರಾದ ಬಿಪಿ ಪಿಎಲ್‌ಸಿ ಹಾಗೂ ನೈಕೋ ರಿಸೋರ್ಸಸ್ ಜೊತೆ  ಒಎನ್‌ಜಿಸಿ ತೈಲಬಾವಿಯಿಂದ ನೈಸರ್ಗಿಕ ಅನಿಲವನ್ನು ಅಕ್ರಮವಾಗಿ ತೆಗೆದಿದೆಯೆಂದು ಈ ಆಯೋಗ ಹೇಳಿದೆ.
ಕೃಷ್ಣ-ಗೋದಾವರಿ ನದಿದಂಡೆ ಪ್ರದೇಶದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಡೆಸುತ್ತಿರುವ ಕೆಜಿ-ಡಿ6 ಗ್ಯಾಸ್ ಬ್ಲಾಕ್ ನಿಂದ ಹೆಚ್ಚುವರಿ ವೆಚ್ಚ ವಸೂಲಿಯನ್ನು ರೂ 9307.22 ಕೋಟಿಗೆ ನಿಗದಿಪಡಿಸಲಾಗಿದೆಯೆಂದು ಸಿಎಜಿ ವರದಿ ಬಂದ ಒಂದು ತಿಂಗಳ ನಂತರ ಈ ಬೆಳವಣಿಗೆ ನಡೆದಿದೆ.
ಶಾಹ್ ಸಮಿತಿಯ ವರದಿಯನ್ನು ಸಾರ್ವಜನಿಕರು ನೋಡಬಾರದೆಂಬುದು ರಿಲಯನ್ಸ್ ಕಂಪೆನಿಯ ಇಂಗಿತವಾಗಿತ್ತು ಹಾಗೂ ಈ ಬಗ್ಗೆ ಶಾಹ್ ಸಮಿತಿ ವರದಿಯ ಐದನೇ ಅಧ್ಯಾಯದಲ್ಲಿ ಹೀಗೆಂದು ಉಲ್ಲೇಖವಾಗಿದೆ - ‘‘ಸಮಿತಿ ಮಾಡುವ ಯಾವುದೇ ಶಿಫಾರಸು ಬಹಿರಂಗ ಪಡಿಸಲಾಗುವುದರಿಂದ, ಆರ್‌ಐಎಲ್‌ಗೆಹಾಗೂ ಅದರ ಗೌರವಕ್ಕೆ ಸರಿಪಡಿಸಲಾಗದ ಹಾನಿಯುಂಟು ಮಾಡಬಹುದು ಎಂದು ಆರ್‌ಐಎಲ್ ಹೇಳಿಕೊಂಡಿದೆ. ಸಮಿತಿಯ ಶಿಫಾರಸಿನ ಆಧಾರದ ಮೇಲೆ ಸರಕಾರ ತನ್ನ ಕ್ರಮಗಳನ್ನು ನಿರ್ಧರಿಸಬಹುದು.’’
ಶಾಹ್ ಸಮಿತಿಯ ವರದಿಯ ಹಿನ್ನೆಲೆ: ಜುಲೈ 2013ರಲ್ಲಿ ಒಎನ್‌ಜಿಸಿ ಹೈಡ್ರೋಕಾರ್ಬನ್ಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದು ತನ್ನ ತೈಲಬಾವಿಯ ಸಮೀಪವೇ ಇರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದರಬ್ಲಾಕ್ ಬಗ್ಗೆ ಮಾಹಿತಿ ಕೇಳಿತ್ತು. ಈ ವಿಚಾರವನ್ನು ವಿಮರ್ಶಿಸಿ ಒಂದು ನಿರ್ಧಾರಕ್ಕೆ ಬರಲು ಒಎನ್‌ಜಿಸಿ, ಆರ್‌ಐಎಲ್ ಹಾಗೂ ಹೈಡ್ರೋಕಾರ್ಬನ್ಸ್ ಮಹಾನಿರ್ದೇಶಕರು ಸ್ವತಂತ್ರ ಕನ್ಸಲ್ಟೆಂಟ್ ಒಬ್ಬರನ್ನು ನೇಮಿಸಲು ನಿರ್ಧರಿಸಿತ್ತು. ಆದರೆ ಈ ಕನ್ಸಲ್ಟೆಂಟ್ ವರದಿ ಬರುವ ಮುನ್ನವೇ ಒಎನ್‌ಜಿಸಿ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು.

‘‘ಆರ್‌ಐಎಲ್ ತನ್ನ ತೈಲಬಾವಿಗಳನ್ನು ಡ್ರಿಲ್ ಮಾಡಿದ ರೀತಿ ಅದೆಷ್ಟು ಪೂರ್ವನಿರ್ಧರಿತವಾಗಿತ್ತೆಂದರೆ ಅದುಒಎನ್‌ಜಿಸಿ ತೈಲಬಾವಿಯತ್ತ ವಾಲಿತ್ತಲ್ಲದೆ ಅಲ್ಲಿಂದ ಸಂಪನ್ಮೂಲಗಳನ್ನು ತೆಗೆಯುವ ಉದ್ದೇಶ ಹೊಂದಿತ್ತು. ತನ್ನ ತೈಲಬಾವಿಯಿಂದ ರೂ 30,000 ಕೋಟಿ ಬೆಲೆಯ ನೈಸರ್ಗಿಕ ಅನಿಲವನ್ನು ಆರ್‌ಐಎಲ್ ಕೊಳ್ಳೆ ಹೊಡೆದಿದೆ’’ ಎಂದೂ ಒಎನ್‌ಜಿಸಿ ಆರೋಪಿಸಿತ್ತು. ನಂತರ ಬಂದ ಕನ್ಸಲ್ಟೆಂಟ್ ವರದಿಯೂ ಇದನ್ನು ದೃಢೀಕರಿಸಿದ್ದರಿಂದ ಈ ವರದಿ ಬಂದ ಎರಡು ವಾರಗಳ ತರುವಾಯ ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಜಸ್ಟಿಸ್ ಶಾಹ್ ಸಮಿತಿಯನ್ನು ನೇಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News